More

    ಶೃಂಗೇರಿ ಶ್ರೀಗಳಿಂದ ಶಿವರಾತ್ರಿ ಪೂಜೆ

    ಶೃಂಗೇರಿ: ಮಹಾಶಿವರಾತ್ರಿ ಅಂಗವಾಗಿ ಶ್ರೀಮಠದಲ್ಲಿ ಉಭಯ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರು ಅಷ್ಠಾನದ ಪೂರ್ವಾಚಾರ್ಯರ ದರ್ಶನ ಪಡೆದರು. ಶಿವಪಂಚಾಕ್ಷರಿ ಹೋಮದ ಪೂರ್ಣಾಹುತಿಯಲ್ಲಿ ಭಾಗಿಯಾದರು.

    ಶ್ರೀ ವಿದ್ಯಾಶಂಕರ, ಶ್ರೀ ಜನಾರ್ದನ ಸ್ವಾಮಿ, ಶ್ರೀ ಸುಬ್ರಹ್ಮಣ್ಯ, ಶ್ರೀ ಶಾರದಾಪರಮೇಶ್ವರಿ, ಶ್ರೀ ಆದಿಶಂಕರಾಚಾರ್ಯ ದೇವಾಲಯಗಳ ದರ್ಶನ ಪಡೆದರು. ಪಟ್ಟಣದ ಮಧ್ಯಭಾಗದಲ್ಲಿರುವ ಶ್ರೀ ಮಲಹಾನಿಕರೇಶ್ವರ ದೇವಾಲಯಕ್ಕೆ ರಾಜಬೀದಿಯ ಮೂಲಕ ವೇದ ಹಾಗೂ ವಾದ್ಯಘೊಷದ ಜತೆಗೆ ಯತಿವರ್ಯರು ಆಗಮಿಸಿದರು. ಮಧ್ಯಾಹ್ನ ಹಿರಿಯ ಶ್ರೀಗಳು ಶ್ರೀ ಸ್ತಂಭಗಣಪತಿ, ಶ್ರೀ ಭವಾನಿ ದೇವಿಗೆ, ಬಳಿಕ ಶ್ರೀ ಮಲಹಾನಿಕರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.

    ರುದ್ರಾಭಿಷೇಕ, ಫಲಪಂಚಾಮೃತ, ಎಳನೀರು, ಕಬ್ಬಿನಹಾಲು ಮುಂತಾದ ಅಭಿಷೇಕ ನೆರವೇರಿಸಿದರು. ಕಿರಿಯ ಶ್ರೀಗಳು ಪೂಜೆಯಲ್ಲಿ ಭಾಗಿಯಾದರು. ನರಸಿಂಹವನದ ಗುರುನಿವಾಸದಲ್ಲಿ ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ನಾಲ್ಕು ಯಾಮಗಳಲ್ಲಿ ಪೂಜೆ ನೆರವೇರಿಸಿದರು. ಪ್ರತಿ ಯಾಮದಲ್ಲಿ ಏಕದಶಾವ್ರತ ರುದ್ರಾಭಿಷೇಕ, ಫಲಪಂಚಾಮೃತ ಅಭಿಷೇಕ ಹಾಗೂ ಋತ್ವಿಜರಿಂದ ರುದ್ರಪಠಣ ನೆರವೇರಿತು.

    ಭಕ್ತರಿಂದ ದೇಗುಲ ದರ್ಶನ: ತಾಲೂಕಿನ ವಿವಿಧೆಡೆ ಶಿವರಾತ್ರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಮನೆಯಲ್ಲಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸಿ ಪಟ್ಟಣದ ಶ್ರೀ ಮಲಹಾನಿಕರೇಶ್ವರ, ಕಿಗ್ಗಾ ಋಷ್ಯಶೃಂಗೇಶ್ವರ, ಶ್ರೀ ವಿದ್ಯಾಶಂಕರ ಮತ್ತಿತರ ದೇವಾಲಯಗಳಲ್ಲಿ ದೇವಾಲಯವನ್ನು ದರ್ಶಿಸಿದರು. ತಾಲೂಕಿನ ಉಳುವಳ್ಳಿ ವಡ್ಡಮಲ್ಲೇಶ್ವರ ಸ್ವಾಮಿ, ಮಳವಳ್ಳಿಯ ಗಂಗಾಧರೇಶ್ವರ, ಹೊಂಬಾಗಿ ಬ್ರಹ್ಮಲಿಂಗೇಶ್ವರ, ನೆಮ್ಮಾರ್ ಸರ್ವೆಶ್ವರ, ಹೆಚ್ಗುಂದ ಶ್ರೀ ಮಲ್ಲಿಕಾರ್ಜುನ, ಹರಾವರಿ ಮಲ್ಲಿಕಾರ್ಜುನ, ಸಣ್ಣಾನೆಗುಂದ ಶ್ರೀ ಭವಾನಿಶಂಕರ ದೇವಾಲಯಗಳಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ನೆರವೇರಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts