More

    ಅಂಗಡಿಗಳ ತೆರವಿಗೆ ಕ್ರಮ

    ಅರಕೇರಾ: ಪಟ್ಟಣದ ತಹಸಿಲ್ ಕಚೇರಿ ಮುಂದಿನ ಅಂಗಡಿಗಳನ್ನು ತೆರವುಗೊಳಿಸುವಂತೆ ಮಾಲೀಕರಿಗೆ ಉಪ ತಹಸೀಲ್ದಾರ್ ಮನೋಹರ್ ನಾಯಕ ಶುಕ್ರವಾರ ನೋಟಿಸ್ ನೀಡಿದರು.

    ಇದನ್ನೂ ಓದಿ: ಹೋರಿ ಹಬ್ಬ ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿ ಪಡೆಯಲಿ; ದೇಸಿ ಕ್ರೀಡೆಯನ್ನು ಪ್ರೋತ್ಸಾಹಿಸಿ; ಕಲಿವಾಳದಲ್ಲಿ ವಕೀಲ ಶರಣಬಸವ ಅಂಗಡಿ ಹೇಳಿಕೆ

    ಆನ್‌ಲೈನ್ ಸೆಂಟರ್, ಜೆರಾಕ್ಸ್ ಅಂಗಡಿಗಳು ಕಚೇರಿ ಮುಂದೆ ಇಟ್ಟುಕೊಂಡಿರುವುದರಿಂದ ಸೌಲಭ್ಯಕ್ಕಾಗಿ ಕಚೇರಿಗೆ ಬರುವ ಜನರ ಓಡಾಟಕ್ಕೆ ತೊಂದರೆಯಾಗುತ್ತಿದೆ. ವಿಶಾಲವಾದ ಸ್ಥಳವಿದ್ದರು ವಾಹನ ನಿಲುಗಡೆಗೆ ಜಾಗವಿಲ್ಲ. ಹೀಗಾಗಿ ಸಾರ್ವಜನಿಕರು ದೂರು ನೀಡಿದ್ದು, ಅದರನ್ವಯ ಅಂಗಡಿ ಮಾಲೀಕರಿಗೆ 7 ದಿನಗಳೊಳಗೆ ತೆರವುಗೊಳಿಸುವಂತೆ ಆದೇಶಿಸಿದ್ದಾರೆ.

    ಕರವೇ ಪದಾಧಿಕಾರಿಗಳಾದ ರಂಗಪ್ಪ ಗಾಲಿ, ಸಾಬಣ್ಣ ನಾಯಕ, ಶರಣಬೇರಿ, ಹನುಮಂತ್ರಾಯ, ಶಿವರಾಯ, ಕಂದಾಯ ನಿರೀಕ್ಷಕ ಉಮಾಶಂಕರ, ಎಫ್‌ಡಿಸಿ ಶರಣಯ್ಯ ಸ್ವಾಮಿ, ವಿಷಯ ನಿರ್ವಾಹಕ ಕನಕರೆಡ್ಡಿ, ಸಿಬ್ಬಂದಿ ವೆಂಕಟೇಶ, ಕರಿಯಪ್ಪ ನಾಯಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts