More

    ಜಿಂಬಾಬ್ವೆ ಎದುರು ಪಾಕ್​ ತಂಡಕ್ಕೆ ಸೋಲು! ಹತಾಶೆಯಿಂದ​ ಭಾರತದ ವಿರುದ್ಧ ನಾಲಿಗೆ ಹರಿಬಿಟ್ಟ ಅಖ್ತರ್​

    ಇಸ್ಲಮಾಬಾದ್​: ಕ್ರಿಕೆಟ್​ನಲ್ಲಿ ಸಾಕಷ್ಟು ಪಳಗಿ ವಿಶ್ವದ ಬಲಿಷ್ಟ ತಂಡಗಳಲ್ಲಿ ಒಂದೆನಿಸಿಕೊಂಡಿರುವ ಪಾಕಿಸ್ತಾನ, ಕ್ರಿಕೆಟ್​ನಲ್ಲಿ ಅಂಬೆಗಾಲು ಇಡುತ್ತಿರುವ ಜಿಂಬಾಬ್ವೆ ವಿರುದ್ಧ ಟಿ20 ವಿಶ್ವಕಪ್​ ಟೂರ್ನಿಯ ಪಂದ್ಯದಲ್ಲಿ ಕೇವಲ 1 ರನ್​ ಅಂತರದಲ್ಲಿ ಸೋತು ತೀವ್ರ ಮುಖಭಂಗ ಅನುಭಿಸಿದೆ. ಎಲ್ಲ ಕಡೆಯಿಂದ ಪಾಕ್​ ತಂಡವನ್ನು ಟೀಕಿಸಲಾಗುತ್ತಿದೆ.

    ಅ.23ರಂದು ನಡೆದ ಸೂಪರ್​ 12 ಹಂತದ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಸೋತು ಸುಣ್ಣವಾಗಿದ್ದ ಪಾಕ್​ಗೆ ಇದೀಗ ಜಿಂಬಾಬ್ವೆ ತಂಡ ಸಹ ಶಾಕ್​ ನೀಡಿದ್ದು, ಟೂರ್ನಿಯಿಂದಲೇ ಪಾಕ್​ ತಂಡ ಹೊರಬಿದ್ದಿರುವ ವಿಶ್ವದ ಎದರು ಪಾಕ್​ ತಂಡಕ್ಕೆ ಭಾರಿ ಮುಜುಗರವಾಗಿದೆ. ಪಾಕ್​ ತಂಡ ಮಾಜಿ ಆಟಗಾರರೇ ತಮ್ಮ ಆಟಗಾರರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಆದರೆ, ಪಾಕ್​ ತಂಡದ ಮಾಜಿ ವೇಗಿ ಶೋಯೆಬ್​ ಅಖ್ತರ್​ ಮಾತ್ರ ಪಾಕ್​ ಸೋಲಿನ ಹತಾಶೆಯಿಂದ ಭಾರತ ವಿರುದ್ಧ ಮಾತನಾಡಿ, ಹಲವರಿಂದ ಟೀಕೆಗೆ ಗುರಿಯಾಗಿದ್ದಾರೆ.

    ಪಾಕಿಸ್ತಾನ ಸೋತಿದ್ದು ತುಂಬಾ ಬೇಸರವಾಯಿತು. ಈ ವಾರವೇ ಪಾಕಿಸ್ತಾನ ಸ್ವದೇಶಕ್ಕೆ ಮರಳಲಿದೆ ಎಂದು ಮೊದಲೇ ಹೇಳಿದ್ದೆ. ಭಾರತ ಕೂಡ ಸೆಮಿಫೈನಲ್​ನಲ್ಲಿ ಟೂರ್ನಿಯಿಂದ ಹೊರಬೀಳಲಿದೆ. ಅವರದು ಕೂಡ ಉತ್ತಮವಾದ ತಂಡವಲ್ಲ ಎಂದು ಅಖ್ತರ್ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ​ ಹೇಳಿದ್ದಾರೆ.

    ಪಾಕ್​ ಸೋಲಿನ ಬೆನ್ನಲ್ಲೇ ಭಾರತ ತಂಡ ಹೊರಬೀಳುವ ಮಾತುಗಳನ್ನಾಡಿರುವ ಅಖ್ತರ್​ ವಿರುದ್ಧ ಭಾರತದ ಕ್ರೀಡಾಭಿಮಾನಿಗಳು ಕಿಡಿಕಾರಿದ್ದಾರೆ. ತಮ್ಮ ತಂಡದ ಸೋಲಿನ ಹತಾಶೆಯಲ್ಲಿ ಅಖ್ತರ್​ ಏನೇನೋ ಮಾತನಾಡುತ್ತಿದ್ದಾರೆ. ಮೊದಲು ನಿಮ್ಮ ತಂಡದ ವೈಫಲ್ಯದ ಬಗ್ಗೆ ಗಮನಹರಿಸಿ ಎಂದು ನೆಟ್ಟಿಗೆರು ತಿಳಿಹೇಳಿದ್ದಾರೆ. (ಏಜೆನ್ಸೀಸ್​)

    ಬೆಂಗಳೂರಿಗೆ ಟೇಕಾಫ್​ ಆಗಬೇಕಿದ್ದ ಇಂಡಿಗೋ ವಿಮಾನದಲ್ಲಿ ಬೆಂಕಿ: ತಪ್ಪಿದ ಭಾರಿ ಅನಾಹುತ

    ಜನವರಿಗೆ ಪ್ರಿಪೇಯ್ಡ್​ ಮೀಟರ್, ಸರ್ಕಾರಿ ಕಚೇರಿಗಳಿಗೆ ಅಳವಡಿಕೆ: ಸಚಿವ ಸುನೀಲ್​ಕುಮಾರ್ ಮಾಹಿತಿ

    ಓ ಚಿತ್ರಕ್ಕೆ ಪುನೀತ್ ರಾಜಕುಮಾರ್ ಗಾಯನ!; ಸಾಂಗ್ ರಿಲೀಸ್..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts