ಇಸ್ಲಮಾಬಾದ್: ಕ್ರಿಕೆಟ್ನಲ್ಲಿ ಸಾಕಷ್ಟು ಪಳಗಿ ವಿಶ್ವದ ಬಲಿಷ್ಟ ತಂಡಗಳಲ್ಲಿ ಒಂದೆನಿಸಿಕೊಂಡಿರುವ ಪಾಕಿಸ್ತಾನ, ಕ್ರಿಕೆಟ್ನಲ್ಲಿ ಅಂಬೆಗಾಲು ಇಡುತ್ತಿರುವ ಜಿಂಬಾಬ್ವೆ ವಿರುದ್ಧ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಕೇವಲ 1 ರನ್ ಅಂತರದಲ್ಲಿ ಸೋತು ತೀವ್ರ ಮುಖಭಂಗ ಅನುಭಿಸಿದೆ. ಎಲ್ಲ ಕಡೆಯಿಂದ ಪಾಕ್ ತಂಡವನ್ನು ಟೀಕಿಸಲಾಗುತ್ತಿದೆ.
ಅ.23ರಂದು ನಡೆದ ಸೂಪರ್ 12 ಹಂತದ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಸೋತು ಸುಣ್ಣವಾಗಿದ್ದ ಪಾಕ್ಗೆ ಇದೀಗ ಜಿಂಬಾಬ್ವೆ ತಂಡ ಸಹ ಶಾಕ್ ನೀಡಿದ್ದು, ಟೂರ್ನಿಯಿಂದಲೇ ಪಾಕ್ ತಂಡ ಹೊರಬಿದ್ದಿರುವ ವಿಶ್ವದ ಎದರು ಪಾಕ್ ತಂಡಕ್ಕೆ ಭಾರಿ ಮುಜುಗರವಾಗಿದೆ. ಪಾಕ್ ತಂಡ ಮಾಜಿ ಆಟಗಾರರೇ ತಮ್ಮ ಆಟಗಾರರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಆದರೆ, ಪಾಕ್ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ ಮಾತ್ರ ಪಾಕ್ ಸೋಲಿನ ಹತಾಶೆಯಿಂದ ಭಾರತ ವಿರುದ್ಧ ಮಾತನಾಡಿ, ಹಲವರಿಂದ ಟೀಕೆಗೆ ಗುರಿಯಾಗಿದ್ದಾರೆ.
ಪಾಕಿಸ್ತಾನ ಸೋತಿದ್ದು ತುಂಬಾ ಬೇಸರವಾಯಿತು. ಈ ವಾರವೇ ಪಾಕಿಸ್ತಾನ ಸ್ವದೇಶಕ್ಕೆ ಮರಳಲಿದೆ ಎಂದು ಮೊದಲೇ ಹೇಳಿದ್ದೆ. ಭಾರತ ಕೂಡ ಸೆಮಿಫೈನಲ್ನಲ್ಲಿ ಟೂರ್ನಿಯಿಂದ ಹೊರಬೀಳಲಿದೆ. ಅವರದು ಕೂಡ ಉತ್ತಮವಾದ ತಂಡವಲ್ಲ ಎಂದು ಅಖ್ತರ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ.
ಪಾಕ್ ಸೋಲಿನ ಬೆನ್ನಲ್ಲೇ ಭಾರತ ತಂಡ ಹೊರಬೀಳುವ ಮಾತುಗಳನ್ನಾಡಿರುವ ಅಖ್ತರ್ ವಿರುದ್ಧ ಭಾರತದ ಕ್ರೀಡಾಭಿಮಾನಿಗಳು ಕಿಡಿಕಾರಿದ್ದಾರೆ. ತಮ್ಮ ತಂಡದ ಸೋಲಿನ ಹತಾಶೆಯಲ್ಲಿ ಅಖ್ತರ್ ಏನೇನೋ ಮಾತನಾಡುತ್ತಿದ್ದಾರೆ. ಮೊದಲು ನಿಮ್ಮ ತಂಡದ ವೈಫಲ್ಯದ ಬಗ್ಗೆ ಗಮನಹರಿಸಿ ಎಂದು ನೆಟ್ಟಿಗೆರು ತಿಳಿಹೇಳಿದ್ದಾರೆ. (ಏಜೆನ್ಸೀಸ್)
ಬೆಂಗಳೂರಿಗೆ ಟೇಕಾಫ್ ಆಗಬೇಕಿದ್ದ ಇಂಡಿಗೋ ವಿಮಾನದಲ್ಲಿ ಬೆಂಕಿ: ತಪ್ಪಿದ ಭಾರಿ ಅನಾಹುತ
ಜನವರಿಗೆ ಪ್ರಿಪೇಯ್ಡ್ ಮೀಟರ್, ಸರ್ಕಾರಿ ಕಚೇರಿಗಳಿಗೆ ಅಳವಡಿಕೆ: ಸಚಿವ ಸುನೀಲ್ಕುಮಾರ್ ಮಾಹಿತಿ