ಬೆಂಗಳೂರು: ರಾಜ್ಯದಲ್ಲಿ ಉಪ ಚುನಾವಣೆ ಸಮರ ಕಾವೇರಿದ್ದು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರು ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಮೂರು ಪಕ್ಷಕ್ಕೂ ಈ ಚುನಾವಣೆಯಲ್ಲಿನ ಗೆಲುವು ಪ್ರತಿಷ್ಠೆಯಾಗಿದ್ದು, ಶತಾಯಗತಾಯ ಗೆಲ್ಲಲೇಬೇಕೆಂದು ಪಣತೊಟ್ಟಿವೆ. ಈ ನಡುವೆ ಕಾಂಗ್ರೆಸ್ ಇಟರ್ನಲ್ ರಿಪೋರ್ಟ್ಗೆ ರಾಜ್ಯದ ಕೈ ನಾಯಕರು ಶಾಕ್ ಆಗಿದ್ದಾರೆ.
ಎರಡು ಕೇತ್ರದ ಉಭಯ ಚುನಾವಣೆಗಳಲ್ಲಿ ಕಾಂಗ್ರೆಸ್ ಪಾಲಿಗೆ ಒಂದು ಪ್ಲಸ್, ಒಂದು ಮೈನಸ್ ಆಗಲಿದೆ ಎಂದು ಪಕ್ಷದ ಇಂಟರ್ನಲ್ ವರದಿ ಹೇಳಿದೆ. ಶಿರಾದಲ್ಲಿ ಕಾಂಗ್ರೆಸ್ಗೆ ಪ್ಲಸ್, ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ಗೆ ಮೈನಸ್ ಇದೆ!
ಆರ್ ಆರ್ ನಗರ ಕ್ಷೇತ್ರದಲ್ಲಿ ಸ್ಥಳೀಯ ಕಾರ್ಯಕರ್ತರ ಕೊರತೆಯೇ ಕಾಂಗ್ರೆಸ್ಗೆ ಹಿನ್ನಡೆ ಆಗಲಿದೆ. ಮುನಿರತ್ನ ಹಿಂದೆಯೇ ಬಿಜೆಪಿಯತ್ತ ಸ್ಥಳೀಯ ಕಾಂಗ್ರೆಸ್ ಮುಖಂಡರು ಮುಖಮಾಡಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಗುರುವಾರ ದಿಗ್ವಿಜಯ ನ್ಯೂಸ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ‘ಎರಡೂ ಕ್ಷೇತ್ರದಲ್ಲೂ ಗೆಲುವು ನಮ್ಮದೆ’ ಎಂದರು.
ಇನ್ನು ಬುಧವಾರ ಶಿರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಡಿಕೆಶಿ, ಶಿರಾ ಉಪಸಮರದಲ್ಲಿ ಮಾಧ್ಯಮಗಳೇ ಜಯಚಂದ್ರ ಮೊದಲನೇ ಸ್ಥಾನದಲ್ಲಿದ್ದಾರೆ ಎಂದು ಬಿಂಬಿಸುತ್ತಿವೆ, ಅದರ ಅರ್ಥ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಅಲ್ಲವೇ. ನಮ್ಮಲ್ಲಿಯೂ ಗುಪ್ತಚರ ವರದಿ ಇದೆ. ಅದರಂತೆ ಚಲಾವಣೆಗೊಳ್ಳುವ ಮತಗಳಲ್ಲಿ ಶೇ.44ಕ್ಕೂ ಹೆಚ್ಚು ಮತಗಳನ್ನು ಕಾಂಗ್ರೆಸ್ ಗಳಿಸಲಿದೆ. ಉಳಿದೆರಡೂ ಪಕ್ಷಗಳು ಶೇ.22 ಮತ್ತು 21 ಮತಗಳಿಸಲಿವೆ ಎಂದಿದ್ದರು.
‘ಧಮ್ಕಿಗಿಮ್ಕಿ ಹಾಕಿದ್ರೆ ಪೊಲೀಸ್ ಸ್ಟೇಷನ್ ಮುಂದೆಯೇ ಚುನಾವಣೆ! ಮುನಿರತ್ನಗೆ ಇದು ಕೊನೇ ವಾರ್ನಿಂಗ್’
ಯಜಮಾನರನ್ನು ಕಳೆದುಕೊಂಡು ತುಂಬಾ ಸಂಕಟದಲ್ಲಿದ್ದೇನೆ, ನನ್ನನ್ನು ನಿಮ್ಮ ಮನೆ ಮಗಳೆಂದು ಭಾವಿಸಿ…