More

    ಅನುದಾನ ತಡೆಗೆ ಶಾಸಕ ಶರತ್ ಬಚ್ಚೇಗೌಡ ಧರಣಿ; ಮಣಿದ ಸಿಎಂ

    ಬೆಂಗಳೂರು: 10 ಕೋಟಿ ಅನುದಾನ ತಡೆ ಹಿಡಿದಿದ್ದಕ್ಕೆ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಎರಡು ದಿನಗಳ ಹಿಂದೆ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ವಿಧಾನ ಸೌಧದ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದ್ದರು.

    ಇದೀಗ ಶಾಸಕ ಶರತ್ ಬಚ್ಚೇಗೌಡ ಧರಣಿಗೆ‌ ಸಿಎಂ ಬಸವರಾಜ್ ಬೊಮ್ಮಾಯಿ ಮಣಿದಿದ್ದಾರೆ. ತಕ್ಷಣವೇ 27 ರಸ್ತೆ ಕಾಮಗಾರಿಗಳ ಅನುಧಾನ 10 ಕೋಟಿ ಬಿಡುಗಡೆಗೆ ಸಿಎಂ ಸೂಚನೆ ನೀಡಿದ್ದಾರೆ.ಕಳೆದ ಗುರುವಾರ ಅನುಧಾನ ತಡೆ ಹಿಡಿದಿದಕ್ಕೆ ವಿಧಾನ ಸೌಧದ ಮುಂದೆ ಧರಣಿ ನಡೆಸಿದ್ದ ಶಾಸಕ ಶರತ್ ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ನೂ ಸಿಎಂ ಮತ್ತು ಸಚಿವ ಎಂಟಿಬಿ ನಾಗರಾಜ್ ವಿರುದ್ದ ಧರಣಿ ನಡೆಸಿ ಶಾಸಕ ಶರತ್ ಸರ್ಕಾರವನ್ನ ಹರಿಹಾಯ್ದಿದ್ದರು. ಹೀಗಾಗಿ ಧರಣಿ ಹಿನ್ನೆಲೆ‌ ಅನುಧಾನ ಬಿಡುಗಡೆ ಮಾಡುವಂತೆ ಸಿಎಸ್ ಮೂಲಕ ಸಿಇಒ ಗೆ ಆದೇಶ ಮಾಡಲಾಗಿದೆ.

    10 ಕೋಟಿ ಬಿಡುಗಡೆ ಮಾಡುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಿಇಒ‌ಗೆ ಪತ್ರ ಬರೆಯಲಾಗಿದೆ. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಮಾಡಿ ಅನುಧಾ‌ನ ಬಿಡುಗಡೆ ಮಾಡಿಸಿದಕ್ಕೆ  ಶಾಸಕ ಶರತ್‌ಬಚ್ಚೇಗೌಡ ಧನ್ಯವಾದ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts