More

    ಶಹಾಬಾದ್: ನಂದಿ ವಿಗ್ರಹ ವಿರೂಪಗೊಳಿಸಿದವನ ಸೆರೆ

    ಕಲಬುರಗಿ: ಶಹಾಬಾದ್ ತಾಲೂಕಿನ ಮುತ್ತಗಾ ಗ್ರಾಮದ ಕಂಠಿ ಬಸವೇಶ್ವರ ದೇವಸ್ಥಾನದ ನಂದಿ ವಿಗ್ರಹ ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಒಬ್ಬನನ್ನು ಗುಲ್ಬರ್ಗ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಮುತ್ತಗಾದ ವೀರಭದ್ರ ಪಂಚಾಳ ಬಂಧಿತ. ಅ.16ರಂದು ಮಧ್ಯರಾತ್ರಿ ಊರಿನ ಶ್ರೀ ಕಂಠಿ ಬಸವೇಶ್ವರ ದೇವಸ್ಥಾನದಲ್ಲಿ ನಂದಿ ವಿಗ್ರಹ ಧ್ವಂಸ ಮಾಡಿದ್ದು ಜಿಲ್ಲಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. 17ರಂದು ದೇವಸ್ಥಾನ ಅಧ್ಯಕ್ಷ ಬಸವರಾಜ ಮಾಲಿಪಾಟೀಲ್ ನೀಡಿದ ದೂರಿನನ್ವಯ ಶಹಾಬಾದ್ ಪೊಲೀಸರು ತನಿಖೆ ಆರಂಭಿಸಿದ್ದರು.

    ಹಗಲಲ್ಲೇ ಮನೆಗಳಿಗೆ ಕನ್ನ ಹಾಕುತ್ತಿದ್ದ ಬಂಧಿತ ವೀರಭದ್ರನ ವಿರುದ್ಧ ಕಲಬುರಗಿ, ಯಾದಗಿರಿ, ಚಿತ್ತಾಪುರ, ಶಹಾಬಾದ್ ಸೇರಿ ವಿವಿಧೆಡೆ ಪ್ರಕರಣ ದಾಖಲಾಗಿದ್ದವು. ಪ್ರಕರಣವೊಂದಕ್ಕೆ ಸಂಬAಧಿಸಿದAತೆ ಗುಲ್ಬರ್ಗ ವಿವಿ ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸಿದಾಗ ಮುತ್ತಗಾದಲ್ಲಿ ಮೂರ್ತಿ ಭಗ್ನಗೊಳಿಸಿರುವುದಾಗಿ ಬಾಯ್ಬಿಟ್ಟಿದ್ದಾನೆ.

    ವಕೀಲರಿಗೆ ಫೀಸು ಕೊಡಲು ಕಳವು: ವೀರಭದ್ರ ಪಂಚಾಳ ಕಳ್ಳತನ ಮಾಡಿ ಜೀವನ ಸಾಗಿಸುತ್ತಿದ್ದ. ಈತನ ವಿರುದ್ಧ ಜಿಲ್ಲೆಯ ಹಲವು ಠಾಣೆಗಳಲ್ಲಿ ಕೇಸ್‌ಗಳಿದ್ದು, ತನ್ನ ಪರ ವಕೀಲರಿಗೆ ಫೀಸು ಕೊಡಲು ಹಣ ಇಲ್ಲದ್ದರಿಂದ ಕಂಠಿ ಬಸವೇಶ್ವರ ದೇವಸ್ಥಾನಕ್ಕೆ ಕನ್ನ ಹಾಕಿದ್ದ. ಏನೂ ಸಿಗದಿದ್ದಾಗ ಕೋಪದಿಂದ ಮೂರ್ತಿ ಧ್ವಂಸ ಮಾಡಿರುವುದಾಗಿ ವಿಚಾರಣೆಯಲ್ಲಿ ಹೇಳಿದ್ದಾನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts