More

    ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ ನಿಧನ

    ಬೆಂಗಳೂರು: ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ ಭಾನುವಾರ ಮುಂಜಾನೆ ನಿಧನರಾಗಿದ್ದಾರೆ.

    ಕನ್ನಡಪ್ರಭ ಸಂಪಾದಕರಾಗಿ ಸೇವೆ ಸಲ್ಲಿಸಿದ್ದ ಅವರು, ವ್ಯಕ್ತಿ ವಿಚಾರ, ಸಮಕಾಲೀನ ರಾಜಕೀಯ ವಿಶ್ಲೇಷಣೆ, ಷೇರುಪೇಟೆ ಸಮಾಚಾರ ಅಂಕಣದ ಮೂಲಕ ಗಮನ ಸೆಳೆದಿದ್ದರು. ಖಾದ್ರಿ ಶಾಮಣ್ಣ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗೂ ಭಾಜನರಾಗಿದ್ದರು.

    ಬೆಂಗಳೂರಿನ ಎಲ್​ಐಸಿ ಕಾಲನಿಯ ತಮ್ಮ ಸ್ವಗೃಹದಲ್ಲಿ ವಯೋಸಹಜ ಕಾರಣದಿಂದ ಅವರು ನಿಧನರಾದರೆಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

    1956-57ರಲ್ಲಿ “ಸ್ವತಂತ್ರ” ಪತ್ರಿಕೆಯಲ್ಲಿ ವೃತ್ತಿ ಆರಂಭಿಸಿದ ಕೆ.ಸತ್ಯನಾರಾಯಣ ಅವರು 1960ರಲ್ಲಿ ಪಿ.ರಾಮಯ್ಯರ `ತಾಯಿನಾಡು’ ಪತ್ರಿಕೆಗೆ ಸೇರಿದರು. ಅಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿ, 1965ರಲ್ಲಿ ಇಂಡಿಯನ್ ಎಕ್ಸ್​ಪ್ರೆಸ್ ಗ್ರೂಪ್‌ಗೆ ಸೇರಿದರು. ಅಲ್ಲಿಂದ ನಿರಂತರವಾಗಿ ಕನ್ನಡಪ್ರಭದಲ್ಲಿ ಅಂಕಣ ಬರೆದುಕೊಂಡು ಬಂದಿದ್ದರು.

    ಉಡುಪಿಯಲ್ಲೊಂದು ನಿಜ ಕಾಂತಾರ? ಕೋಲ ನಡೆಯುವಾಗಲೇ ಸಾವು! ಕೋರ್ಟ್ ಮೆಟ್ಟಿಲೇರಿದವನ ತೀರ್ಮಾನ ದೈವ ಮಾಡಿತೇ!

    ಸ್ಯಾಂಟ್ರೋ ರವಿ ‘ಪಿಂಪ್’ ಮಾತ್ರವಲ್ಲ… ಬಗೆದಷ್ಟೂ ಬಯಲಾಗ್ತಿದೆ ಈತನ ಕರಾಳ ಮುಖ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts