ಬೆಂಗಳೂರು: ಅಣ್ಣ-ತಮ್ಮಂದಿರಿಬ್ಬರು ರೌಡಿಸಂ ತೋರುತ್ತಿರುವ ಜತೆಗೆ ತಮ್ಮ ಸ್ವತ್ತಿಗೆ ಅತಿಕ್ರಮಣವಾಗಿ ಪ್ರವೇಶ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಪ್ರಾಣ ಬೆದರಿಕೆಯನ್ನೂ ಒಡ್ಡಿದ್ದಾರೆ ಎಂದು ವೃದ್ಧ ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ದೊಡ್ಡಜಾಲದ ಯರ್ತಗಾನಹಳ್ಳಿಯ ಗೌರಮ್ಮ-ನರಸಿಂಹಯ್ಯ ದಂಪತಿ ಸಿಸಿಬಿ ಉಪ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಬೆಂಗಳೂರಿನ ಯಲಹಂಕದ ಅಟ್ಟೂರು ಗ್ರಾಮದಲ್ಲಿ ತನ್ನ ಪತಿ ನರಸಿಂಹಯ್ಯ ಅವರ ಪಿತ್ರಾರ್ಜಿತ ಜಾಗವಿದ್ದು, ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲಾತಿಗಳೂ ಇವೆ. ಅದಾಗ್ಯೂ ಅಟ್ಟೂರು ಗ್ರಾಮದ ರೌಡಿಶೀಟರ್ಗಳಾದ ನಾರಾಯಣ ಮತ್ತು ಆತನ ತಮ್ಮ ಚಂದ್ರು ಅಲಿಯಾಸ್ ವಾಲ್ಮೀಕಿ ಚಂದ್ರು ಪ್ರತಿದಿನ ಆ ಜಾಗಕ್ಕೆ ಬಂದು ಅದು ತಮ್ಮದು ಎಂದು ತಂಟೆ-ತಕರಾರು ಮಾಡುತ್ತಿದ್ದಾರೆ.
ನಿನ್ನೆ ಸಂಜೆ ಕೂಡ ನಾನು ಪತಿಯೊಂದಿಗೆ ಆ ಸ್ಥಳಕ್ಕೆ ಹೋಗಿದ್ದಾಗ ನಾರಾಯಣ ಮತ್ತು ಚಂದ್ರು 8-10 ಜನರೊಂದಿಗೆ ಬಂದು, ಇನ್ನೊಮ್ಮೆ ಈ ಸ್ವತ್ತಿನ ಬಳಿ ಬಂದರೆ ಸುಮ್ಮನೆ ಬಿಡುವುದಿಲ್ಲ, ಒಂದು ಗತಿ ಕಾಣಿಸುತ್ತೇನೆ ಎಂದು ಹಲ್ಲೆ ಮಾಡಲು ಯತ್ನಿಸಿದ್ದಾರೆ. ಅಲ್ಲದೆ ಆ ಜಾಗದ ವಿಚಾರವಾಗಿ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣವನ್ನು ಹಿಂದಕ್ಕೆ ಪಡೆಯಬೇಕು, ಇಲ್ಲದಿದ್ದರೆ ನಿಮ್ಮನ್ನು ಸಾಯಿಸಿ ಇಲ್ಲೇ ಹೂತು ಹಾಕುತ್ತೇವೆ ಎಂದೂ ಪ್ರಾಣ ಬೆದರಿಕೆ ಒಡ್ಡಿದ್ದಾರೆ. ಈ ಬಗ್ಗೆ ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದಾಗ ಪೊಲೀಸರು ತಮ್ಮ ದೂರನ್ನು ಸ್ವೀಕರಿಸಲಿಲ್ಲ ಎಂದು ಅವರು ಸಿಸಿಬಿ ಡಿಸಿಪಿಗೆ ದೂರು ನೀಡಿದ್ದಾರೆ.
ವಿಜಯಾನಂದ ಫಸ್ಟ್ಲುಕ್ ಬಿಡುಗಡೆ; ಡಾ. ವಿಜಯ ಸಂಕೇಶ್ವರ ಅವರ ರೋಚಕ ಕಥೆ ಈಗ ಬಯೋಪಿಕ್
ಡಾ.ರಾಜಕುಮಾರ್-ಡಾ.ವಿಷ್ಣುವರ್ಧನ್ ಅಭಿಮಾನಿಗಳ ಅಪೂರ್ವ ಸಂಗಮ; ಜಂಟಿ ಹೋರಾಟಕ್ಕೂ ಸಜ್ಜಾದ ಅಭಿಮಾನಿಗಳು…