More

    ಶಾಲೆಗಳ ಅಭಿವೃದ್ಧಿಗೆ ಎಲ್ಲರ ಸಹಕಾರ ಅವಶ್ಯ

    ಹನುಮಸಾಗರ: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಎಸ್ಡಿಎಂಸಿ ಹಾಗೂ ಸಾರ್ವಜನಿಕರ ಸಹಕಾರ ಅವಶ್ಯ ಎಂದು ಸಿಆರ್‌ಪಿ ಮಂಜುನಾಥ ಪೂಜಾರ ಹೇಳಿದರು.

    ಇದನ್ನೂ ಓದಿ: ಅವಿಭಜಿತ ದ.ಕ. ಅಭಿವೃದ್ಧಿಗೆ ಆಸ್ಕರ್ ದೂರದೃಷ್ಟಿ ಕಾರಣ: ಪ್ರತಾಪಚಂದ್ರ ಶೆಟ್ಟಿ

    ಸಮೀಪದ ಕಬ್ಬರಗಿ ಸಮಾಹಿಪ್ರಾ ಶಾಲೆಯಲ್ಲಿ ಶುಕ್ರವಾರ ನೂತನ ಎಸ್ಡಿಎಂಸಿ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮದ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರು, ಎಸ್ಡಿಎಂಸಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಶ್ರಮಿಸಬೇಕು.

    ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ನಿರ್ಮಾಣ ಮಾಡಲು ಎಲ್ಲರೂ ಒಂದಾಗಿ ಸಹಕರಿಸಿ ಎಂದರು. ನೂತನ ಪದಾಧಿಕಾರಿಗಳು ಶಾಲಾ ಅಭಿವೃದ್ಧಿಗೆ 81,000 ರೂ. ದೇಣಿಗೆ ನೀಡಿದರು.

    ಹನಮಂತಪ್ಪ ಮಲ್ಲಪ್ಪ ಕರಡಿ (ಅಧ್ಯಕ್ಷ), ನೀಲವ್ವ ಚಂದಪ್ಪ ಕಾಟಾಪೂರ (ಉಪಾಧ್ಯಕ್ಷೆ), ದುರಗಪ್ಪ ಕಪಲಪ್ಪ ಮಾದರ, ದುರಗಪ್ಪ ಮಾಸಪ್ಪ ಭಜಂತ್ರಿ, ಅಂದಪ್ಪ ಮಾಸನಗೌಡ ಪಡಚಿಂತಿ, ನೀಲಪ್ಪ ಯಲ್ಲಪ್ಪ ನೀರಲಕೊಪ್ಪ, ಮಂಜುನಾಥ ಯಲ್ಲಪ್ಪ ಚಳಗೇರಿ,

    ರಂಗಪ್ಪ ಸಂಗಪ್ಪ ಗುರಿಕಾರ, ಮಸಣಪ್ಪ ಚಂದಪ್ಪ ಸಂಗಮದ, ಸುರೇಶ ಬೀರಪ್ಪ ವಜ್ಜಲ, ಜ್ಯೋತಿ ಬಸವರಾಜ ಭಜಂತ್ರಿ, ರೇಣುಕಾ ಮಾಸಪ್ಪ ಲಂಕೇರ, ಕನಕಮ್ಮ ಮಹಾಂತೇಶ ಗೌಡ್ರ, ಹನಮವ್ವ ಸಂಗಪ್ಪ ನಂದವಾಡಗಿ, ಲಕ್ಷ್ಮೀಬಾಯಿ ಬಸವರಾಜ ಮ್ಯಾಗಳಮನಿ,

    ನೇತ್ರಾವತಿ ಮಾಂತಯ್ಯ ಹಿರೇಮಠ, ಬಾಳವ್ವ ಮಂಜುನಾಥ ಕುರಿ, ಫಾತಿಮಾ ಚಂದುಸಾಬ ಇಚನಾಳ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
    ಮುಖ್ಯ ಶಿಕ್ಷಕ ಚಿದಾನಂದ ಬಡಿಗೇರ, ಶಿಕ್ಷಕರು, ಗ್ರಾಮಸ್ಥರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts