ನವದೆಹಲಿ: ಕರೊನಾ ಹೆಮ್ಮಾರಿಯ ರೌದ್ರನರ್ತನ ದೇಶಾದ್ಯಂತ ಮುಂದುವರಿದಿರುವಂತೆ ಆಯುರ್ವೇದ, ಹೋಮಿಯೋಪಥಿ ಮತ್ತು ಯುನಾನಿ ಸೇರಿ ಆಯುಷ್ ಚಿಕಿತ್ಸಾ ಪದ್ಧತಿಯಲ್ಲಿ ಚಿಕಿತ್ಸೆ ಲಭ್ಯವಿದೆ. ಅದನ್ನು ಬಳಸಲು ಅವಕಾಶ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ತಿರಸ್ಕರಿಸಿದೆ.
ಮೊದಲಿಗೆ ಕರೊನಾ ಸೋಂಕಿಗೆ ರೋಗನಿರೋಧಕ ಚುಚ್ಚುಮದ್ದು ಸಿದ್ಧವಾಗಲಿ. ಆ ಬಳಿಕ ಆಯುಷ್ ಚಿಕಿತ್ಸಾ ಪದ್ಧತಿ ಬಗ್ಗೆ ನಿರ್ಧರಿಸೋಣ ಎಂದು ಹೇಳಿದ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ನ್ಯಾಯಪೀಠ, ಸದ್ಯ ಕರೊನಾಕ್ಕೆ ಆಯುಷ್ ಚಿಕಿತ್ಸೆ ನೀಡಲು ಅವಕಾಶ ನಿರಾಕರಿಸಿತು.
ಡಾ. ಸಿ.ಆರ್. ಶಿವರಾಂ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ ನ್ಯಾಯಪೀಠ, ಕರೊನಾ ವೈರಸ್ ಹೊಸದಾಗಿದೆ. ಇದನ್ನು ನಿಯಂತ್ರಿಸುವ ವಿಷಯದಲ್ಲಿ ಸದ್ಯ ಪ್ರಯೋಗಗಳನ್ನು ಮಾಡಲು ಸಾಧ್ಯವಿಲ್ಲ. ತಜ್ಞರು ಮೊದಲು ಇದಕ್ಕೊಂದು ವ್ಯಾಕ್ಸಿನ್ ಸಿದ್ಧಪಡಿಸಲು. ಆಮೇಲೆ ನೋಡೋಣ ಎಂದು ಹೇಳಿತು.
ಕೇರಳ ಹೈಕೋರ್ಟ್ನಲ್ಲಿ ಪೆಂಡಿಂಗ್: ಆಯುಷ್ ಇಲಾಖೆ ಏಪ್ರಿಲ್ 11ರಂದು ಬಿಡುಗಡೆ ಮಾಡಿದ್ದ ಸಲಹಾಪತ್ರದ ಪ್ರಕಾರ ಕೋವಿಡ್ 19 ಚಿಕಿತ್ಸೆಯಲ್ಲಿ ಹೋಮಿಯೋಪಥಿಯನ್ನು ಬಳಸಬಹುದಾಗಿದೆ. ಇದಕ್ಕೆ ಅವಕಾಶ ಕೋರಿ ಕೇರಳ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ.
ಈ ಬಗ್ಗೆ ಅಭಿಪ್ರಾಯ ಕೇಳಿ ಹೈಕೋರ್ಟ್ ನ್ಯಾಯಪೀಠ ಕೇರಳ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಸರ್ಕಾರ ಇನ್ನಷ್ಟೇ ಪ್ರಮಾಣಪತ್ರ ಸಲ್ಲಿಸಬೇಕಿರುವುದರಿಂದ, ಡಾ. ಎಂ.ಎಸ್. ವಿನೀತ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಇನ್ನೂ ಬಾಕಿಯಾಗಿದೆ.
ಮಕ್ಕಳನ್ನು ನಲಿಸುತ್ತಾ ಕಲಿಸುವ ಮಕ್ಕಳವಾಣಿ ಯೂಟ್ಯೂಬ್ ಚಾನಲ್; ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಂದ ಚಾಲನೆ