More

    ವಿದ್ಯಾರ್ಥಿಗಳು ಮಹಾತ್ಮರ ತತ್ವ-ಆದರ್ಶ ಪಾಲಿಸಲಿ

    ಸವಣೂರ: ತಾಲೂಕಿನ ಹೊಸನೀರಲಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿ ಅವರ ಜಯಂತಿ ಆಚರಿಸಲಾಯಿತು.
    ಎಸ್‌ಡಿಎಂಸಿ ಅಧ್ಯಕ್ಷ ಧರಿಯಪ್ಪಗೌಡ ಪಾಟೀಲ ಮಾತನಾಡಿ, ದೇಶ ಕಂಡ ಮಹಾನ್ ನಾಯಕರ ದಿನಾಚರಣೆಯಲ್ಲಿ ಭಾಗವಹಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಮಹಾತ್ಮರ ತತ್ವ-ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
    ಮಂತ್ರೋಡಿ ಗ್ರಾಪಂ ಅಧ್ಯಕ್ಷ ಈಶ್ವರಪ್ಪ ವಿಜಾಪುರ, ಭೂ ನ್ಯಾಯಮಂಡಳಿ ಸದಸ್ಯ ನಾಗಪ್ಪ ವಾಲ್ಮೀಕಿ, ಎಸ್‌ಡಿಎಂಸಿ ಸದಸ್ಯ ಕುರುವತ್ತೆಪ್ಪ ಮಲ್ಲೂರ, ಚಂದ್ರು ಮಾಗಿ, ಸುರೇಶ ಹರಿಜನ, ಬಸವಣ್ಣೆಪ್ಪ ವಾಲ್ಮೀಕಿ, ಬಸೀರಅಹ್ಮದ ಹೊಂಬರಡಿ, ಗದಿಗೆಪ್ಪಗೌಡ ದೇವಸೂರ, ಶಂಕ್ರಪ್ಪ ವಾಲ್ಮೀಕಿ, ದಸ್ತಗಿರಸಾಬ್ ಹೊಂಬರಡಿ, ಮುಖ್ಯ ಶಿಕ್ಷಕ ಎಸ್.ಟಿ. ಮಹಾಪುರುಷ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts