More

    ಹಗಲಲ್ಲೇ ಕೊಡಲಿ 3 ಫೇಸ್ ವಿದ್ಯುತ್ – ರೈತ ಸಂಘದ ಪದಾಧಿಕಾರಿಗಳ ಒತ್ತಾಯ

    ಸಂಡೂರು: ರೈತರ ಪಂಪ್‌ಸೆಟ್‌ಗಳಿಗೆ ದಿನಕ್ಕೆ 7ರಿಂದ 10 ಗಂಟೆ ಅವಧಿವರೆಗ 3ಫೇಸ್ ವಿದ್ಯುತ್ ಸರಬರಾಜು ಮಾಡಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಯಿಸಿ ರೈತ ಸಂಘ ಜೆಸ್ಕಾಂ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿತು.

    ಸಂಘದ ಜಿಲ್ಲಾಧ್ಯಕ್ಷ ಎಂ.ಎಲ್.ಕೆ.ನಾಯ್ಡು ಮಾತನಾಡಿ, ರೈತರು ಜಮೀನಿನಲ್ಲಿ ನೀರು ಹಾಯಿಸಲು ಅನುಕೂಲವಾಗುವಂತೆ ಹಗಲು ಹೊತ್ತಿನಲ್ಲಿ ಮಾತ್ರ 3 ಫೇಸ್ ವಿದ್ಯುತ್ ನೀಡಬೇಕು. ತಾಲೂಕಿನಲ್ಲಿ ಯಾವುದೇ ಕಾಲುವೆ ನೀರಾವರಿ ಅನುಕೂಲವಿಲ್ಲ, ಬಹುತೇಕ ರೈತರು ಪಂಪ್‌ಸೆಟ್ ನೀರಿನಿಂದ ಬೆಳೆಯುತ್ತಾರೆ ಆದ್ದರಿಂದ ಬೇಸಿಗೆಯ ನೆಪದಲ್ಲಿ ವಿನಾಕಾರಣ ವಿದ್ಯುತ್ ಕಡಿತ ಮಾಡಬಾರದು. ಬಾಗಿದ ವಿದ್ಯುತ್ ಕಂಬಗಳನ್ನು ಸರಿಪಡಿಸಬೇಕು. ಮಾವು, ಅಡಕೆ ಬೆಳೆಗಳಿಗೆ ಕೇಬಲ್ ಮಾದರಿಯ ಲೈನ್ ಅಳವಡಿಸಬೇಕು. ಟಿಸಿ ಸುಟ್ಟರೆ 24 ತಾಸುಗಳಲ್ಲಿ ಹೊಸ ಟಿಸಿ ಹಾಕಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts