ಸಂಡೂರು: ಕೇಂದ್ರ ಬರ ಅಧ್ಯಯನ ತಂಡ ಅ.7ರಂದು ಭೇಟಿ ನೀಡುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ನೇತೃತ್ವದ ಅಧಿಕಾರಿಗಳು ಶುಕ್ರವಾರ ತಾಲೂಕಿನ ಸೋವೇನಹಳ್ಳಿ, ಕಾಳಿಂಗೇರಿ, ಕೋಡಿಹಳ್ಳಿ, ನಿಡುಗುರ್ತಿಯಲ್ಲಿ ಬೆಳೆ ಹಾನಿ ಪರಿಶೀಲಿಸಿತು.
ಮೆಕ್ಕೆಜೋಳ, ಜೋಳ, ರಾಗಿ, ತೊಗರಿ, ಟೊಮ್ಯಾಟೊ ಬೆಳೆ ಹಾನಿ ಹಾಗೂ ಅಮೃತ ಸರೋವರ, ಕುಡಿವ ನೀರಿನ ಕಾಮಗಾರಿ, ಸಾಮಾಜಿಕ ಅರಣ್ಯ ಇಲಾಖೆ ಕಾರ್ಯಕ್ರಮಗಳು, ಉದ್ಯೋಗ ಖಾತ್ರಿ ಕಾಮಗಾರಿಗಳನ್ನು ವೀಕ್ಷಿಸಿದರು.
ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಮಲ್ಲಿಕಾರ್ಜುನ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಂತೋಷ್ ಸಪ್ಪಂಡಿ, ತಹಸೀಲ್ದಾರ್ ಜಿ.ಅನಿಲ್ ಕುಮಾರ್, ಎಡಿಎ ಮಂಜುನಾಥ ರೆಡ್ಡಿ, ತೋಟಗಾರಿಕೆ ಎಡಿ ಹನುಮಪ್ಪ ನಾಯಕ, ಪಶು ಸಂಗೋಪನಾ ಇಲಾಖೆ ಎಡಿ ಡಾ.ವಲೀಬಾಷಾ, ಆರ್ಎಫ್ಒ ಮಾಬ್ಬಾಷಾ, ವಾಟರ್ ಸಪ್ಲೈ ಎಇಇ ವಿನಾಯಕ, ತಾಪಂ ಎಡಿ ರೇಣುಕಾಚಾರ್ಯ ಇತರರಿದ್ದರು.