More

    ಯಶ್​ ದಾಡಿ ಬಗ್ಗೆ ಕಾಲೆಳೆದ ಸಂಗೀತ ಮಾಂತ್ರಿಕ ಹಂಸಲೇಖ!

    ಬೆಂಗಳೂರು: ಕೆಜಿಎಫ್ ಸಿನಿಮಾ ಶುರುವಾಗಿದ್ದೇ, ಆಗಿದ್ದು ನಟ ಯಶ್ ಒಂದೇ ಲುಕ್ ನಲ್ಲಿ ಇದ್ದಾರೆ. ಕೆಜಿಎಫ್ ಸಿನಿಮಾಗೂ ಮೊದಲು ಪ್ರತಿ ಚಿತ್ರಕ್ಕೂ ಒಂದೊಂದು ರೀತಿಯ ವಿಭಿನ್ನ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈಗ ಸರಿ ಸುಮಾರು 8 ವರ್ಷಗಳಿಂದ ಒಂದೇ ಲುಕ್ ನಲ್ಲಿದ್ದಾರೆ ಯಶ್. ಈ ಬಗ್ಗೆ
    ಸಂಗೀತ ನಿರ್ದೇಶಕ ಹಂಸಲೇಖ ಅವರು ರಾಕಿಂಗ್‌ ಸ್ಟಾರ್‌ ಯಶ್ ಅವರ ಗಡ್ಡ, ಕೆಜಿಎಫ್‌ ಚಿತ್ರ ಹಾಗೂ ಇತ್ತೀಚಿನ ದಿನಗಳ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ.

    ಇದನ್ನೂ ಓದಿ:ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎಗೆ ಭರ್ಜರಿ ಗೆಲುವು: ನಿತೀಶ್​ಕುಮಾರ್​ಗೆ ಸವಾಲು ಹಾಕುತ್ತಲೇ ಭವಿಷ್ಯ ನುಡಿದ ಚುನಾವಣೆ ಚಾಣಕ್ಯ

    ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿರುವ ಅವರು, ಇತ್ತೀಚಿನ ಸಿನಿಮಾಗಳಲ್ಲಿ ಹಿಂಸೆಯನ್ನು ವೈಭವೀಕರಿಸಲಾಗುತ್ತಿದೆ, ಹಾಗೂ ಸಿನಿಮಾದಲ್ಲಿ ಬರೀ ಕತ್ತಲೇಯೇ ಹೆಚ್ಚಾಗಿ ಕಾಣುತ್ತಿದೆ ಎಂದು ಹೇಳಿದ್ದಾರೆ.

    ಯಶ್​ ದಾಡಿ ಬಗ್ಗೆ ಕಾಲೆಳೆದ ಸಂಗೀತ ಮಾಂತ್ರಿಕ ಹಂಸಲೇಖ!

    ಇಂಡಿಯಾದಲ್ಲಿ ದೊಡ್ಡ ದೊಡ್ಡ ಸಿನಿಮಾಗಳು, ದೊಡ್ಡ ದೊಡ್ಡ ಸ್ಟಾರ್‌ಗಳು, ದೊಡ್ಡ ಸಿನಿಮಾಗಳು ಕೈಯಲ್ಲಿ ಮಚ್ಚುಗಳನ್ನು ಬಿಟ್ಟಿಲ್ಲ. ದೊಡ್ಡ ದೊಡ್ಡ ರಿವಾಲ್ವರ್‌ಗಳು, ಎಕೆ 47 ಗಳನ್ನು ಬಿಟ್ಟಿಲ್ಲ. ಹಿಂಸೆಗೆ ಏನೇನೋ ಬೇಕೋ ಎಲ್ಲಾ ರೀತಿಯ ವಿಚಿತ್ರವಾದ ಆಯುಧಗಳನ್ನು ತರುತ್ತಿದ್ದಾರೆ. ಇದನ್ನು ವೈಭವೀಕರಿಸೋದನ್ನ ಯಾರೂ ಬಿಟ್ಟಿಲ್ಲ. ಎಲ್ಲರೂ ಮಚ್ಚುಗಳು, ಗನ್ನುಗಳಲ್ಲೇ ಹೊಡೆಯುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

    ಜೀವನದಲ್ಲಿ ಎಲ್ಲಿ ನೋಡಿದರೆ ಬಣ್ಣಗಳನ್ನು ನೋಡುತ್ತಿದ್ದ ಕಾಲದಲ್ಲಿ ಸಿನಿಮಾ ಥಿಯೇಟರ್‌ಗೆ ಹೋದ್ರೆ ಬರೀ ಕಪ್ಪು-ಬಿಳುಪು ಸಿನಿಮಾಗಳು ಇರ್ತಿದ್ದವು. ನಮಗೆಲ್ಲರಿಗೂ ಕಲರ್‌ ಬ್ಲೈಂಡ್‌ ಆಗಿತ್ತು. ಚಿತ್ರಗಳನ್ನ ನಾವು ಕಲರ್‌ ಬ್ಲೈಂಡ್‌ನಲ್ಲೇ ನೋಡ್ತಿದ್ದೆವು. ಸುಮಾರು 40-45 ವರ್ಷಗಳ ಕಾಲ ಸಿನಿಮಾಗಳನ್ನು ಹಾಗೇ ನೋಡಿದ್ದೆವು. ಆಮೇಲೆ ಬಣ್ಣಗಳು ಬಂದಿದ್ದವು.

    ಟೆಕ್ನಾಲಜಿ ಬೆಳೆದು ಏನೋನೋ ಆದವು. ಈಗ ಯಾವ ಸಿನಿಮಾಗಳನ್ನೂ ಕೂಡ ಹೆಚ್ಚು ಬೆಳಕೇ ಇರೋದಿಲ್ಲ. ಬರೀ ಕತ್ತಲು. ಕಣ್ಣು, ದಾಡಿ, ಮೂಗು, ಕಿವಿ, ಕೈ, ರಕ್ತ.. ಇದು ಮಾತ್ರ ಕಾಣುತ್ತೆ. ಯಾರಿಗೂ ಬಣ್ಣಗಳೇ ಇಷ್ಟವಿಲ್ಲ. ಎಲ್ಲಾ ಕತ್ತಲಲ್ಲೇ ಮುಳುಗಿ ಹೋಗಿದ್ದೇವೆ. ಯಾವ ಸಿನಿಮಾ ಬೇಕಾದ್ರೂ ನೋಡಿ. ಇತ್ತೀಚೆಗೆ ಯಾವ್ದೋ ಹೊಸ ಚಿತ್ರ ನೋಡಿದೆ. ಇಡೀ ಸಿನಿಮಾ ಕತ್ತಲೆ. ಅಂದ್ರೆ ಮನುಷ್ಯ ಗೊತ್ತಿಲ್ಲದ ಹಾಗೆ ಕತ್ತಲ ಕಡೆ ಹೋಗ್ತಾ ಇದ್ದಾರೆ. ಕಲಾರಂಗಕ್ಕೆ ಕತ್ತಲು ಕವಿಯುತ್ತಿದೆ ಎನ್ನುವ ಅರ್ಥ ಇದು.

    ಕೆಜಿಎಫ್‌ ಎಫೆಕ್ಟ್‌. ಕನ್ನಡ ಸಿನಿಮಾದಲ್ಲಿ ಎಲ್ಲಿ ಬೇಕಾದ್ರೂ ನೋಡಿ, ಕ್ಯಾಮೆರಾಮೆನ್‌ ಕೂಡ ದಾಡಿ ಬಿಟ್ಟಿರ್ತಾನೆ. ಡೈರೆಕ್ಟರ್‌, ಕೋರಿಯೋಗ್ರಾಫರ್‌, ಡೈರೆಕ್ಟರ್‌ ಕೊನೆಗೆ ಪ್ರೊಡ್ಯೂಸರ್‌ ಕೂಡ ದಾಡಿ ಬಿಟ್ಟಿರ್ತಾನೆ. ಎಡಿಟರ್‌ ಕೂಡ ತಾನೇನು ಕಮ್ಮಿ ಅಂತಾ ಅವನೂ ದಾಡಿ ಬಿಟ್ಟಿರ್ತಾನೆ. ಮೊದಲೆಲ್ಲಾ ಏನಾದ್ರೂ ತಪ್ಪು ಮಾಡಿದ್ರೆ, ‘ಏನಾಗಿದ್ಯೋ ನಿಂಗೆ ದಾಡಿ’ ಅಂತಾ ಬೈಯ್ತಾ ಇದ್ರು. ಆದರೆ, ಈಗ ದಾಡಿಯೇ ಫ್ಯಾಶನ್‌ ಆಗಿದೆ ಎಂದಿದ್ದಾರೆ.

    ಅಲ್ಲು ಅರ್ಜುನ್ ಪುಷ್ಪ-2 ಸಿನಿಮಾ ರಿಲೀಸ್ ಡೇಟ್ ಅನೌನ್ಸ್! ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts