More

    22 ದಿನಗಳ ಬಳಿಕ ಸನತ್ ಶೆಟ್ಟಿ ಮೃತದೇಹ ಮಣ್ಣಿನಡಿ ಪತ್ತೆ

    ಬೆಳ್ತಂಗಡಿ: ಎಳನೀರು, ಬಂಗಾರಪಲ್ಕೆ ಜಲಪಾತ ಬಳಿ ನಾಪತ್ತೆಯಾಗಿದ್ದ ಯುವಕ ಸನತ್ ಶೆಟ್ಟಿ ಮೃತದೇಹ ಸತತ 22 ದಿನಗಳ ಕಾರ್ಯಾಚರಣೆಯ ಬಳಿಕ ಮಂಗಳವಾರ ಸಿಕ್ಕಿದೆ.

    ಜ.25ರಂದು ಮಧ್ಯಾಹ್ನ 1.30ರ ಸುಮಾರಿಗೆ ಮಲವಂತಿಗೆ ಗ್ರಾಮದ ಬಂಗಾರಪಲ್ಕೆ ಬಡಮನೆ ಅಬ್ಬಿ ಜಲಪಾತ ವೀಕ್ಷಣೆಗೆ ತೆರಳಿದ್ದ ಸಂದರ್ಭ ಗುಡ್ಡ ಕುಸಿದು ಸನತ್ ಮಣ್ಣಿನಡಿ ಸಿಲುಕಿದ್ದು, ಉಳಿದವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು. 22 ದಿನಗಳ ಕಾಲ ಕಾರ್ಯಾಚರಣೆ ನಡೆಸಿದರೂ ಯಾವುದೇ ಸುಳಿವು ಲಭ್ಯವಾಗಿರಲಿಲ್ಲ. ಮಂಗಳವಾರ ಶವ ಪತ್ತೆಯಾಗಿದೆ.
    ಮೃತ ಸನತ್ ಶೆಟ್ಟಿ ಲಾಯಿಲಾ ಗ್ರಾಮದ ಕಾಶಿಬೆಟ್ಟು ಕೃಷ್ಣ ವಾಸುದೇವ ಶೆಟ್ಟಿ ಅವರ ಪುತ್ರ. ಉಜಿರೆ ಎಸ್‌ಡಿಎಂ ಕಾಲೇಜಿನ ದ್ವಿತೀಯ ಪದವಿ ವಿದ್ಯಾರ್ಥಿಯಾಗಿದ್ದರು.

    ಜ.26ರಿಂದ ಘಟನಾ ಸ್ಥಳದಲ್ಲಿ ರಾಜ್ಯ ವಿಪತ್ತು ನಿರ್ವಹಣಾ ತಂಡ, ಅಗ್ನಿಶಾಮಕದಳ, ಗೃಹರಕ್ಷಕ ದಳ, ಪೊಲೀಸ್ ಇಲಾಖೆ ಸಿಬ್ಬಂದಿ ಸತತ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಇವರ ಜೊತೆಗೆ ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಸ್ಥಳೀಯರು, ಸಾರ್ವಜನಿಕರು ಸಹಕರಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts