More

    ಮಾ.17ರಂದು ನಗರದಲ್ಲಿ ನಾಯಕತ್ವ ಸಮಾವೇಶ: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಹೇಳಿಕೆ

    ಮಂಡ್ಯ: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ವತಿಯಿಂದ ಮಾ.17ರಂದು ಬೆಳಗ್ಗೆ 10 ಗಂಟೆಗೆ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ಹಿಂದುಳಿದ ವರ್ಗಗಳ ನಾಯಕತ್ವ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ತಿಳಿಸಿದರು.
    ನಗರದ ರೈತ ಸಭಾಂಗಣ ಆವರಣದ ಕುವೆಂಪು ಪ್ರತಿಮೆ ಬಳಿ ಸಮಾವೇಶದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು. ಹಿಂದುಳಿದವರಲ್ಲಿ ಸಂಘಟನೆ, ಸಾಮರಸ್ಯ, ರಾಜಕೀಯ ಪ್ರಜ್ಞೆ ಮತ್ತು ಚುನಾವಣಾ ನಾಯಕತ್ವವವನ್ನು ಮೂಡಿಸುವ ಆಶಯದಿಂದ ಸಮಾವೇಶವನ್ನು ಆಯೋಜಿಸಲಾಗಿದೆ ಎಂದರು.
    ಜಿಲ್ಲೆಯಲ್ಲಿ ಪ್ರಮುಖವಾಗಿರುವ 25ಕ್ಕೂ ಹೆಚ್ಚು ಹಿಂದುಳಿದ ಸಮುದಾಯದ ಮುಖಂಡರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ಹತ್ತಾರು ವರ್ಷಗಳಿಂದ ಸಮುದಾಯದ ಸಂಘಟನೆ ಹೋರಾಟ ಮತ್ತು ಜನಪರ ಕಾರ್ಯಗಳಲ್ಲಿ ತೊಡಗಿರುವವರನ್ನು ಗುರುತಿಸಿ ಅಭಿನಂದಿಸಲಾಗುವುದು. ವಿಶೇಷವಾಗಿ ಕಾಯಕ ಶರಣರು, ದಾರ್ಶನಿಕರು, ಸಂತರು ಮತ್ತು ಮಹನೀಯರ ಚಿತ್ರ ಉತ್ಸವ ನಡೆಸಲಾಗುವುದು. ಹಿಂದುಳಿದ ವರ್ಗಗಳ ಸ್ಥಿತಿಗತಿ, ರಾಜಕೀಯ ಸವಾಲು ಮತ್ತಿತರೆ ಮಹತ್ವದ ವಿಚಾರಗಳ ಸಮಾಲೋಚನೆ ನಡೆಯಲಿದೆ. ಹಿಂದುಳಿದವರ ಸಾಲ ಮನ್ನಾ ಜನಸಂಖ್ಯೆಗೆ ಅನುಗುಣವಾಗಿ ವಿಧಾನಸಭಾ ಬಿ ಫಾರ್ಮ್ ಹಂಚಿಕೆಗೆ ಒತ್ತಾಯ ಹಾಗೂ ಎಚ್. ಕಾಂತರಾಜು ವರದಿ ಜಾರಿಗಾಗಿ ಸರ್ಕಾರದ ಗಮನ ಸೆಳೆಯುವುದು ಸಮಾವೇಶದ ಮತ್ತೊಂದು ಉದ್ದೇಶವಾಗಿದೆ ಎಂದರು.
    ಹಿಂದುಳಿದ ವರ್ಗಗಳ ಮುಖಂಡರಾದ ಕೆ.ಎಚ್.ನಾಗರಾಜು, ಎಂ.ಕೃಷ್ಣ, ಎಚ್.ಪಿ.ಸತೀಶ್, ಪ್ರಶಾಂತ್, ಬಸವರಾಜು, ಹುರುಗಲವಾಡಿ ರಾಮಯ್ಯ, ವೈರಮುಡಿ, ರಾಜಣ್ಣ, ಗುರುಮೂರ್ತಿ, ದಸಂಸ ಕೃಷ್ಣ, ಥಾಮಸ್ ಬೆಂಜಮಿನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts