ಶಿವಮೊಗ್ಗ: ಕೆಎಸ್ಆರ್ಟಿಸಿ ಶಿವಮೊಗ್ಗ ವಿಭಾಗದ ಸಾಗರ ಘಟಕದಿಂದ ಸಾಗರ-ಶಿವಮೊಗ್ಗ-ವಿಜಯಪುರ (ಹರಿಹರ, ಹೊಸಪೇಟೆ, ಇಳಕಲ್ ಮಾರ್ಗ) ನೂತನ ಎರಡು ನಾನ್ ಎಸಿ ಸ್ಲೀಪರ್(ಪಲ್ಲಕ್ಕಿ) ಬಸ್ಗಳು ಕಾರ್ಯಾಚರಣೆ ಆರಂಭಿಸಿವೆ.
ಸಾಗರದಿಂದ ಪ್ರತಿ ರಾತ್ರಿ 7.30ಕ್ಕೆ ಹೊರಟು ವಿಜಯಪುರಕ್ಕೆ ಮರುದಿನ ಬೆಳಗ್ಗೆ 5.30ಕ್ಕೆ ತಲುಪಲಿದೆ ಹಾಗೂ ವಿಜಯಪುರದಿಂದ ರಾತ್ರಿ 7.30ಕ್ಕೆ ಹೊರಟು ಮರುದಿನ ಬೆಳಗ್ಗೆ 5.30ಕ್ಕೆ ಸಾಗರ ತಲುಪಲಿದೆ ಎಂದು ಕರಾರಸಾನಿ ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ವಿಜಯಕುಮಾರ್ ತಿಳಿಸಿದ್ದಾರೆ.