ಜೈಪುರ: ಇಂದು ಬೆಳಗ್ಗೆ ನಡೆದ ಎರಡನೇ ಶಾಸಕಾಂಗ ಪಕ್ಷದ ಸಭೆಗೂ ಹಾಜರಾಗದ ಸಚಿನ್ ಪೈಲಟ್ ಅವರನ್ನು ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಹಾಗೂ ಡಿಸಿಎಂ ಸ್ಥಾನದಿಂದ ಕಾಂಗ್ರೆಸ್ ಕೆಳಗಿಳಿಸಿದೆ.
ಕಾಂಗ್ರೆಸ್ ವರಿಷ್ಠರು ತಮ್ಮನ್ನು ಎರಡೂ ಹುದ್ದೆಗಳಿಂದ ತೆಗೆದುಹಾಕುತ್ತಿದ್ದಂತೆ ಟ್ವೀಟ್ ಮಾಡಿರುವ ಸಚಿನ್ ಪೈಲಟ್ ಅವರು ಒಂದೇ ಸಾಲಿನಲ್ಲಿ ತಮ್ಮ ಮನಸಿನಲ್ಲಿರುವುದನ್ನು ಹೊರಹಾಕಿದ್ದಾರೆ.
ಸತ್ಯಕ್ಕೆ ಭಂಗ ತರಬಹುದು, ಅದನ್ನು ಕದಡಬಹುದು ಆದರೆ ಎಂದಿಗೂ ಸತ್ಯವನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಸಚಿನ್ ಪೈಲಟ್ ಟ್ವೀಟ್ ಮಾಡಿದ್ದಾರೆ.
ಸಚಿನ್ ಪೈಲಟ್ ಅವರಿಗೆ ಬೆಂಬಲ ನೀಡಿದ್ದ ಸಚಿವರಾದ ವಿಶ್ವೇಂದ್ರ ಸಿಂಗ್ ಮತ್ತು ರಮೇಶ್ ಮೀನಾ ಅವರನ್ನೂ ಹುದ್ದೆಯಿಂದ ಕೆಳಕ್ಕಿಳಿಸಿದ್ದಾಗಿ ಕಾಂಗ್ರೆಸ್ ನಾಯಕ ರಣದೀಪ್ ಸರ್ಜೇವಾಲಾ ತಿಳಿಸಿದ್ದಾರೆ. (ಏಜೆನ್ಸೀಸ್)
ಮುಂದುವರಿದ ಸುದೀಪ್ ಸಮಾಜಮುಖಿ ಕಾರ್ಯ: 4 ಸರ್ಕಾರಿ ಶಾಲೆಗಳನ್ನು ದತ್ತು ಪಡೆದ ಕಿಚ್ಚ