ಬೆಂಗಳೂರು: ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ವಿ.ಪ್ರಸಾದ್ ಹೆಸರಿನಲ್ಲಿ ಫೇಸ್ ಬುಕ್ ಫೇಕ್ ಅಕೌಂಟ್ ಮಾಡಿ ಹಣ ಕೇಳಿರುವ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಸಾದ್ ಗಿಡ್ಡಪ್ಪನಹಳ್ಳಿ ಎಂಬ ಫೇಸ್ ಬುಕ್ ಫೇಕ್ ಅಕೌಂಟ್ ಮಾಡಿ ಅದರಲ್ಲಿ ಹಣ ಕಳಹಿಸುವಂತೆ ಬ್ಯಾಂಕ್ ಅಕೌಂಟ್ ನಂಬರ್ ಸಮೇತ ಹಾಕಿದ್ದರು. ಮೊದಲಿಗೆ ದೇವನಹಳ್ಳಿ ಶಿಕ್ಷಕರೊಬ್ಬರು ಇದನ್ನು ನೋಡಿ ಪ್ರಸಾದ್ ಅವರ ಗಮನಕ್ಕೆ ತಂದಿದ್ದಾರೆ. ಕೂಡಲೇ ಎಚ್ಚೆತ್ತ ಅವರು ಇದು ಫೇಕ್ ಅಕೌಂಟ್ ಆಗಿದ್ದು ಯಾರೂ ಹಣ ಹಾಕಬಾರದು ಎಂದು ತಕ್ಷಣ ಮೆಸೇಜ್ ಹಾಕಿದ್ದಾರೆ.
ನನ್ನ ಫೇಸ್ ಬುಕ್ ಹ್ಯಾಕ್ ಮಾಡಿ ಹಣ ಹಾಕುವಂತೆ ಕೇಳಿದ್ದರು. ಸುಮಾರು 20 ಮಂದಿ ನನಗೆ ಕರೆ ಮಾಡಿ ಏನಿದು ಎಂದು ಕೇಳಿದಾಗ ಇದು ಫೇಕ್ ಅಕೌಂಟ್ ಎಂದು ಹೇಳಲಾಯಿತು. ಈ ಸಂಬಂಧ ಸೂಲಿಬೆಲೆ ಪೊಲೀಸ್ ಠಾಣೆಗೆ ದೂರು ನೀಡಲಾಗುವುದು ಎಂದು ಪ್ರಸಾದ್ ಹೇಳಿದ್ದಾರೆ.
ಮಹಾರಾಷ್ಟ್ರದ ಗಡಿಯಲ್ಲಿ ಪೊಲೀಸ್- ನಕ್ಸಲರ ಗುಂಡಿನ ಕಾಳಗ: 11 ಮಂದಿಯ ಹತ್ಯೆ
ವಯಸ್ಸಾದರೂ ಮದುವೆಯಾಗಿಲ್ಲವೆಂದು ಹೆತ್ತವರಿಂದಲೇ ಸಿನಿಮಾ ನಿರ್ದೇಶಕನ ಬರ್ಬರ ಹತ್ಯೆ- ದೇಹ ಪೀಸ್ ಪೀಸ್!