ನವದೆಹಲಿ : ಇಲ್ಲಿಯ ಬಿಜ್ವಾಸನ್ ನಗರದಲ್ಲಿರುವ ಕೊಳಗೇರಿಯಲ್ಲಿ ಭೀಕರ ಅಗ್ನಿದುರಂತ ಸಂಭವಿಸಿದ್ದು ಆರು ಮಂದಿ ಸಜೀವವಾಗಿ ದಹಿಸಿಹೋಗಿರುವ ಘಟನೆ ನಡೆದಿದೆ. ಈ ಆರೂ ಮಂದಿ ಒಂದೇ ಕುಟುಂಬದವರು ಎನ್ನಲಾಗಿದೆ.
ಈ ಅಗ್ನಿ ದುರಂತಕ್ಕೆ ಸಿಲಿಂಡರ್ ಬ್ಲಾಸ್ಟ್ ಆಗಿರುವುದು ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದು, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಟ್ರಾನ್ಸ್ಫಾರ್ಮರ್ ಬಳಿಯ ಎರಡು ಕೊಳಗೇರಿ ಪ್ರದೇಶಗಳಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಈ ಪ್ರದೇಶದಲ್ಲಿನ ಮನೆಗಳು ಸಂಪೂರ್ಣ ಭಸ್ಮವಾಗಿ ಹೋಗಿವೆ. ಆದರೆ ಒಂದು ಮನೆಯಲ್ಲಿದ್ದ ಆರು ಮಂದಿ ಸಜೀವವಾಗಿ ದಹಿಸಿಹೋಗಿದ್ದಾರೆ.
ಕೂಡಲೇ ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಅಗಮಿಸಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡಿದ್ದಾರೆ.
ವಿವಿಧ ಪದವೀಧರರಿಗೆ ಹಾಲು ಒಕ್ಕೂಟದಲ್ಲಿ 80 ಹುದ್ದೆಗಳಿಗೆ ಅರ್ಜಿ ಆಹ್ವಾನ
ಅವಳು ಇವ್ರ ಮೊದಲ ಲವ್ ಅಂತೆ: ಎರಡು ಮಕ್ಕಳಾದ್ರೂ ಅವಳನ್ನು ನೋಡಿದ್ರೆ ಏನೇನೋ ಆಗತ್ತಂತೆ- ನಾನೇನು ಮಾಡ್ಲಿ?
ಧೈರ್ಯಂ ಸರ್ವತ್ರ ಸಾಧನಂ… ಕರೊನಾದ ಸಾವಿನ ಬಾಯಿಗೆ ಹೋಗಿ ಜಯಿಸಿ ಬಂದ ಶತಾಯುಷಿ ದಂಪತಿ!