More

    ಪೊಲೀಸ್‌ ಅಂಕಲ್‌ ನಾನು ಶಾಲೆಗೆ ಹೋಗಲ್ಲ… ಆ ದಾರಿಯಲ್ಲಿ ಬಂದು ನೋಡಿ… ಪುಟಾಣಿಯಿಂದ ಹೀಗೊಂದು ಕಂಪ್ಲೇಂಟ್‌!

    ಚಿತ್ತೂರು (ಆಂಧ್ರಪ್ರದೇಶ): ಅಂಕಲ್‌ ಅಂಕಲ್‌ ನಾನು ಶಾಲೆಗೆ ಹೋಗಲ್ಲ. ರಸ್ತೆ ಸರಿಯಿಲ್ಲ. ಶಾಲೆಗೆ ಹೋಗುವ ದಾರಿಯಲ್ಲಿ ಜೆಸಿಬಿಯಿಂದ ಅಗೆಯಲಾಗಿದೆ. ಟ್ರ್ಯಾಕ್ಟರ್​ಗಳನ್ನು ನಿಲ್ಲಿಸಿ ರಸ್ತೆ ಅಡ್ಡಗಟ್ಟಲಾಗಿದೆ. ನೀವು ಬಂದು ಅದನ್ನು ಸರಿಪಡಿಸಿ’..! ‌‌

    ಹೀಗೊಂದು 6 ವರ್ಷದ ಪುಟಾಣಿಯೊಬ್ಬ ಪೊಲೀಸರಲ್ಲಿ ದೂರು ಸಲ್ಲಿಸಿರುವ ಘಟನೆ ಚಿತ್ತೂರು ಜಿಲ್ಲೆಯ ಪಲಮೇರ್​ನಲ್ಲಿ ನಡೆದಿದೆ. ಇಲ್ಲಿಯ ಆದರ್ಶ ಶಾಲೆಯ ಬಳಿ ನಡೆಯುತ್ತಿರುವ ಕಾಮಗಾರಿಯಿಂದಾಗಿ ತನಗೆ ಶಾಲೆಗೆ ಹೋಗಲು ಮತ್ತು ಬರಲು ಕಿರಿಕಿರಿಯುಂಟಾಗಿದೆ. ಟ್ರಾಫಿಕ್​ ಸಮಸ್ಯೆಯನ್ನು ಬಗೆಹರಿಸಿಕೊಡಬೇಕು. ಈಗಲೇ ಎಲ್ಲಾ ಪೊಲೀಸರು ಸ್ಥಳಕ್ಕೆ ಬರಬೇಕು ಎಂದು ವಿದ್ಯಾರ್ಥಿ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದು, ಈ ಬಾಲಕನ ಮನವಿ ಕೇಳಿ ಪೊಲೀಸರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ಈ ವಿದ್ಯಾರ್ಥಿ ಹೆಸರು ಕಾರ್ತಿಕೇಯನ್.​ ಬಾಲಕನ ಕಂಪ್ಲೇಂಟ್‌ ಪಡೆದುಕೊಂಡು ಪೊಲೀಸರು ಸಮಸ್ಯೆಯನ್ನು ಪರಿಹರಿಸುವುದಾಗಿ ವಾಗ್ದಾನ ಮಾಡಿದ್ದಾರೆ. ಮಾತ್ರವಲ್ಲದೇ, ತಮ್ಮ ಫೋನ್​ ನಂಬರ್​ ಅನ್ನು ಬಾಲಕನಿಗೆ ನೀಡಿ ಏನಾದರೂ ಸಮಸ್ಯೆಯಾದರೆ ನನಗೆ ಕರೆ ಮಾಡು ಎಂದು ಹೇಳಿ ಕಳುಹಿಸಿದ್ದಾರೆ.

    ಕಣ್ಣೆದುರೇ ಹಿಂದೂಗಳ ಶವಗಳ ರಾಶಿ, ಇಸ್ಲಾಂ ಒಪ್ಪಿಕೊಳ್ಳಲು ಬೆದರಿಕೆ… ಆಗಲೇ ಸರ್ಕಾರ ಮನಸ್ಸು ಮಾಡಿದ್ದರೆ…

    15 ವರ್ಷವಾದ್ರೂ ಮುಗಿಯದ ಇದೆಂಥ ದ್ವೇಷನಪ್ಪಾ? ಜನಸಂದಣಿ ನಡುವೆ ಬಂದು 500ಕ್ಕೂ ಹೆಚ್ಚು ಸಲ ಕಚ್ಚಿದ ಹಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts