ಬೆಂಗಳೂರು: ಫೇಸ್ಬುಕ್ನಲ್ಲಿ ಪಾದ್ರಿ ಸೋಗಿನಲ್ಲಿ ಪರಿಚಯನಾದ ಸೈಬರ್ ಕಳ್ಳ, 60 ಸಾವಿರ ಡಾಲರ್ ಉಡುಗೊರೆ ಕಳುಹಿಸಿರುವುದಾಗಿ ನಂಬಿಸಿ ಯುವಕನಿಗೆ 3.63 ಲಕ್ಷ ರೂ. ಪಡೆದು ವಂಚಿಸಿದ್ದಾನೆ.
ವಿವೇಕನಗರದ ಡೇವಿಡ್ ಸನ್ಸ್ ವಂಚನೆಗೆ ಒಳಗಾದವ. ಕೆಲ ದಿನಗಳ ಹಿಂದೆ ಡೇವಿಡ್, ಫೇಸ್ಬುಕ್ನಲ್ಲಿ ಅಪರಿಚಿತ ವ್ಯಕ್ತಿ ಪರಿಚಯವಾಗಿದ್ದು, ಅಮೆರಿಕದಲ್ಲಿ ಪೀಠರ್ ಜಾನ್ ಚರ್ಚ್ನಲ್ಲಿ ಪಾದ್ರಿ ಎಂದು ಸ್ನೇಹ ಬೆಳೆಸಿದ್ದಾನೆ. ಮೊಬೈಲ್ ಸಂಭಾಷಣೆ ಶುರು ಮಾಡಿದ್ದು, ನಿನಗೆ 60 ಸಾವಿರ ಡಾಲರ್ ಉಡುಗೊರೆ ಕಳುಹಿಸುವುದಾಗಿ ಪಾದ್ರಿ ಹೇಳಿದ್ದಾನೆ.
ಅದನ್ನು ನಂಬಿದ ಡೇವಿಡ್, ಮನೆ ವಿಳಾಸ ನೀಡಿದ್ದಾನೆ. ಕೆಲವೇ ದಿನಕ್ಕೆ ದೆಹಲಿ ವಿಮಾನ ನಿಲ್ದಾಣ ಅಧಿಕಾರಿ ಸೋಗಿನಲ್ಲಿ ಡೇವಿಡ್ ಮೊಬೈಲ್ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ನಿಮ್ಮ ಹೆಸರಿಗೆ ದುಬಾರಿ ಗಿಫ್ಟ್ ಬಂದಿದೆ. ತೆರಿಗೆ ಪಾವತಿ ಮಾಡಿದರೆ ನಿಮ್ಮ ವಿಳಾಸಕ್ಕೆ ಕೋರಿಯರ್ ಕಳುಹಿಸುವುದಾಗಿ ಹೇಳಿದ್ದಾನೆ. ಅದನ್ನು ನಂಬಿದ ಡೇವಿಡ್, ವಂಚಕರು ನೀಡಿದ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿದ್ದಾರೆ.
ಇದಾದ ಮೇಲೆ ಮತ್ತೊಬ್ಬ ವ್ಯಕ್ತಿ ಕರೆ ಮಾಡಿ ಮತ್ತಷ್ಟು ಹಣ ಸುಲಿಗೆ ಮಾಡಿದ್ದಾನೆ. ಇದೇ ರೀತಿ 3.65 ಲಕ್ಷ ರೂ. ಅನ್ನು ಹಂತ ಹಂತವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಿದ್ದಾರೆ. ಯಾವುದೇ ಕೊಡುಗೆ ಮನೆಗೆ ಬಾರದೆ ಇದ್ದಾಗ ನೊಂದ ಡೇವಿಡ್, ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ಕೇಂದ್ರ ವಿಭಾಗ ಸಿಇಎನ್ ಠಾಣೆ ಪೊಲೀಸರು ತಿಳಿಸಿದ್ದಾರೆ.
ದಂಪತಿ ಜಗಳ ಬಿಡಿಸಲು ಹೋಗಿ ಹೆಣವಾದ ಯುವಕ- ಆಸ್ಪತ್ರೆ ಬದಲು ಠಾಣೆಗೆ ಕರೆದೊಯ್ದ ಕುಟುಂಬಸ್ಥರು!
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ- 150 ಹಾಸಿಗೆಗಳ ಲಭ್ಯ
ಮಳೆಯಲ್ಲಿ ನೆನೆದು ಕೂಲ್ ಕೂಲ್ ಆದ ನಟಿ ದೀಪಿಕಾ ವಿಡಿಯೋ ನೋಡಿ ಗರಂ ಗರಂ ಆದ ನೆಟ್ಟಿಗರು!