More

    ನೆರೆ ಸಂತ್ರಸ್ತರ ಸಹಾಯಾರ್ಥವಾಗಿ ಸಂಗೀತ ಸಂಜೆ: ಸಂಗೀತ ಪ್ರಿಯರನ್ನು ರಂಜಿಸಲಿರುವ ಎಸ್​ಪಿಬಿ, ಪಾಸ್​ಗಳಿಗೆ ಸಂಪರ್ಕಿಸಿ

    ಮಂಗಳೂರು: ರಾಜ್ಯದ ನೆರೆ ಸಂತ್ರಸ್ತರ ಸಹಾಯಾರ್ಥವಾಗಿ ವಿಜಯವಾಣಿ ಮತ್ತು ದಿಗ್ವಿಜಯ 24×7 ನ್ಯೂಸ್​ ಮಾಧ್ಯಮ ಸಹಯೋಗದಲ್ಲಿ ದಿಗ್ಗಜ ಗಾಯಕ ಡಾ.ಎಸ್​.ಪಿ.ಬಾಲಸುಬ್ರಮಣ್ಯಂ ಅವರ ಕಂಠಸಿರಿಯಲ್ಲಿ ಪಂಚಭಾಷಾ ಗೀತೆಗಳ ಸಂಗೀತ ಸಂಜೆಯನ್ನು ಮಂಗಳೂರಿನಲ್ಲಿ ಇದೇ ಭಾನುವಾರ ಹಮ್ಮಿಕೊಳ್ಳಲಾಗಿದೆ.

    ದಿನಾಂಕ 19-1-2020ರ ಭಾನುವಾರ ಸಂಜೆ 6.30ರಿಂದ ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್​ ಕಾಲೇಜು ಗ್ರೌಂಡ್ಸ್​ನಲ್ಲಿ ವಿಜಯವಾಣಿ ಮತ್ತು ದಿಗ್ವಿಜಯ 24×7 ನ್ಯೂಸ್​ ಅರ್ಪಿಸುವ ಅಮೃತನೋನಿ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ.

    ಭಾರತೀಯ ಚಿತ್ರರಂಗದ ಎಲ್ಲ ಭಾಷೆಗಳಲ್ಲೂ ಹಾಡಿಗೆ ಧ್ವನಿಗೂಡಿಸಿ, ಮೋಡಿ ಮಾಡಿರುವ ಸಂಗೀತ ಲೋಕದ ಮಾಂತ್ರಿಕ ಡಾ.ಎಸ್​.ಪಿ. ಬಾಲಸುಬ್ರಮಣ್ಯಂ ಅವರು ತಮ್ಮ ಮಧುರ ಕಂಠದಿಂದ ಸಂಗೀತ ಪ್ರಿಯರನ್ನು ರಂಜಿಸಲಿದ್ದಾರೆ.

    ನೆರೆ ಸಂತ್ರಸ್ತರ ಸಹಾಯಾರ್ಥವಾಗಿ ಈ ಕಾರ್ಯಕ್ರಮವನ್ನು ಕೋತಾಸ್​ ಕಾಫಿ ಹಾಗೂ ಎಂಟಿಆರ್​ ಗೊಜ್ಜು ಮ್ಯಾಜಿಕ್​ ಮಸಾಲಾ ಅವರಿಂದ ಆಯೋಜಿಸಲ್ಪಟ್ಟಿದೆ. ನಂದಿನಿ ಅಸೋಸಿಯೇಟ್​ ಸ್ಪಾನ್ಸರ್​ ಆಗಿದ್ದು, ಸ್ವಾಮಿ ಎಂಟರ್​ಪ್ರೈಸಸ್​ ಅವರಿಂದ ಈವೆಂಟ್​ ತಯಾರಿ ನಡೆದಿದೆ. ಕಾರ್ಯಕ್ರಮಕ್ಕೆ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್​ ಮಾಧ್ಯಮ ಸಹಯೋಗವಿದೆ.

    ಪಾಸ್​ಗಳಿಗಾಗಿ ಸಂಪರ್ಕಿಸಿ
    ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿ ಉಳ್ಳವರು 9900331622 ನಬರ್​ಗೆ ಕರೆ ಮಾಡಿ ಪಾಸ್​ಗಳನ್ನು ಪಡೆದುಕೊಳ್ಳಬಹುದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts