More

    ಹೊಸ ವರ್ಷದ ಶುಭಾಶಯ ಕೋರಹೋಗಿ ಮಸಣ ಸೇರಿದ ಕಾರ್ಕಳದ ಯುವಕರು!

    ಕಾರ್ಕಳ: ಎಲ್ಲರಿಗೂ ಹೊಸ ವರ್ಷದ ಶುಭಾಶಯ ಕೋರಲು ಹೋದ ಯುವಕರಿಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದ ಬಜಗೋಳಿ ರಾಷ್ಟ್ರೀಯ ಹೆದ್ದಾರಿ ಮಿಯಾರು ಬಳಿ ನಡೆದಿದೆ.

    ಮೃತರನ್ನು ಶರಣ್ ಮತ್ತು ಸಿದ್ದು ಎಂದು ಗುರುತಿಸಲಾಗಿದೆ.

    ಇವರು ನಿನ್ನೆ ರಾತ್ರಿ ಸುಮಾರು 10.30ರ ಹೊತ್ತಿಗೆ ಮಿಯಾರು ಬಳಿ ಹೊಸ ವರ್ಷಕ್ಕೆ ಸ್ವಾಗತ ಕೋಡಲು ಹ್ಯಾಪ್ಪಿ ನ್ಯೂ ಇಯರ್​ ಎಂದು ರಸ್ತೆಯಲ್ಲಿ ಬರೆಯುತ್ತಿದ್ದರು. ಇದೇ ವೇಳೆ ವೇಗವಾಗಿ ಬಂದಿರುವ ಕಾರೊಂದು ಇವರಿಗೆ ಡಿಕ್ಕಿ ಹೊಡೆದಿದೆ.

    ಇಬ್ಬರೂ ತೀವ್ರವಾದ ರಕ್ತಸ್ರಾವದಿಂದ ಕೆಲ ಹೊತ್ತು ರಸ್ತೆಯಲ್ಲಿಯೇ ಒದ್ದಾಡುತ್ತಿದ್ದರು. ನಂತರ ಮೃತಪಟ್ಟಿರುವುದಾಗಿ ಸ್ಥಳೀಯರು ಹೇಳಿದ್ದಾರೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಹಳಿ ತಪ್ಪಿದ ಬೆಂಗಳೂರು- ತಾಳಗುಪ್ಪ ಎಕ್ಸ್​ಪ್ರೆಸ್​: ರಾತ್ರಿ ನಡೆದ ಅನಾಹುತ

    ಹೊಸ ಹೊರ್ಷದ ಮುನ್ನಾ ದಿನ ಭೀಕರ ಅಪಘಾತ, ಸ್ಥಳದಲ್ಲೇ ಇಬ್ಬರು ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts