ರಾಯಚೂರು: ಇಂದು ಎಲ್ಲೆಡೆ ಸಂಭ್ರಮದಿಂದ ಆಯುಧ ಪೂಜೆಯನ್ನು ನಡೆಸಲಾಗುತ್ತಿದೆ. ಆಯುಧ ಹಾಗೂ ವಾಹನಗಳಿಗೆ ಜನರು ಪೂಜೆ ಸಲ್ಲಿಸುತ್ತಿದ್ದಾರೆ.
ಆದರೆ ಆಯುಧ ಪೂಜೆಯ ಜವಾಬ್ದಾರಿ ಮರೆತು ನಾಡಬಂದೂಕಿನಿಂದ ಗುಂಡು ಹಾರಿಸಿ ವಿವಾದಕ್ಕೀಡಾಗಿದ್ದಾರೆ ಶಾಸಕ ಶಿವನಗೌಡ ನಾಯಕ.
ರಾಯಚೂರು ಜಿಲ್ಲೆಯ ದೇವದುರ್ಗ ಶಾಸಕ ಶಿವನಗೌಡ ನಾಯಕ ಅವರು 2-3 ಬಾರಿ ಗುಂಡು ಹಾರಿಸಿದ್ದಾರೆ. ಸ್ವಗ್ರಾಮ ಅರಕೇರಾದ ಮನೆಯಲ್ಲಿ ಆಕಾಶದೆತ್ತರಕ್ಕೆ ಗುಂಡು ಹಾರಿಸಿ, ಆಯುಧ ಪೂಜೆ ಆಚರಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. (ದಿಗ್ವಿಜಯ ನ್ಯೂಸ್)
ಇಲ್ಲಿದೆ ನೋಡಿ ವಿಡಿಯೋ:
ರಾಯಚೂರು ಜಿಲ್ಲೆಯ ದೇವದುರ್ಗ ಶಾಸಕ ಶಿವನಗೌಡ ನಾಯಕ ನಾಡಬಂದೂಕಿನಿಂದ ಗುಂಡು ಹಾರಿಸಿ ಆಯುಧಪೂಜೆ ಮಾಡಿದ್ದಾರೆ! pic.twitter.com/6u5P2IpqNI
— Vijayavani (@VVani4U) October 4, 2022
ಟೈಲರ್ ಕನ್ಹಯ್ಯಾಲಾಲ್ ಕೊಲೆ ಕಣ್ಣಾರೆ ಕಂಡ ಸಾಕ್ಷಿದಾರನಿಗೆ ಬ್ರೈನ್ ಹ್ಯಾಮರೇಜ್: ಶಸ್ತ್ರಚಿಕಿತ್ಸೆ
ಮೋದಿ ಕಾರ್ಯಕ್ರಮಕ್ಕೆ ಪತ್ರಕರ್ತರಿಗೆ ನಡತೆ ಪ್ರಮಾಣ ಪತ್ರ ಕಡ್ಡಾಯ: ಭಾರಿ ಟೀಕೆಯ ನಂತರ ಆದೇಶ ವಾಪಸ್