More

    VIDEO: ಆಕಾಶವಾಣಿ ಸಿಬ್ಬಂದಿ ಮನೆಯಲ್ಲಿಯೇ ಲಾಕ್‌! ವಸತಿಗೃಹಗಳಿಗೆ ಬೀಗ ಹಾಕಿ ಹೋದ ದುಷ್ಕರ್ಮಿಗಳು

    ಧಾರವಾಡ: ಧಾರವಾಡ ಆಕಾಶವಾಣಿ ಸಿಬ್ಬಂದಿ ಇರುವ ವಸತಿ ಗೃಹಗಳಿಗೆ ಯಾರೋ ದುಷ್ಕರ್ಮಿಗಳು ಬೀಗ ಹಾಕಿರುವ ಘಟನೆ ನಡೆದಿದೆ.

    ಧಾರವಾಡ ಕೆಸಿಡಿ ಬಳಿ ಇರುವ‌ ವಸತಿ ಗೃಹಗಳಲ್ಲಿ ಈ ಘಟನೆ ಸಂಭವಿಸಿದೆ. ಹೊರಗಡೆಯಿಂದ ದುಷ್ಕರ್ಮಿಗಳು ಬೀಗ ಹಾಕಿ ಹೋಗಿದ್ದು ಇದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

    ಈ ಪ್ರದೇಶದಲ್ಲಿ ಇರುವ 10ಕ್ಕೂ ಹೆಚ್ಚು ಮನೆಗಳಿಗೆ ಹೊರಗಡೆಯಿಂದ ಬೀಗ ಹಾಕಲಾಗಿದೆ. ಕೆಲಮಹಡಿಯ ಮನೆಗಳಿಗೆ ಮಾತ್ರ ಈ ರೀತಿಮಾಡಲಾಗಿದೆ. ಸಾಲದು ಎಂಬುದಕ್ಕೆ ಮೇಲ್ಮಹಡಿಗೆ ಹೋಗದಂತೆಯೂ ಮೆಟ್ಟಿಲಿನ ಬಾಗಿಲಿಗೂ ಬೀಗ ಹಾಕಲಾಗಿದೆ.

    ಇದರಿಂದ ಆಕಾಶವಾಣಿ ಸಿಬ್ಬಂದಿ ಸೇರಿದಂತೆ ಇಲ್ಲಿ ವಾಸಿಸುತ್ತಿರುವವರೆಲ್ಲರೂ ಒಳಗಡೆಯೆ ಲಾಕ್ ಆಗಿದ್ದಾರೆ. ನಸುಕಿನ ಜಾವ 4 ಗಂಟೆ ಸುಮಾರಿಗೆ ಈ ಕೃತ್ಯ ನಡೆದಿರೋ ಶಂಕೆ ಉಂಟಾಗಿದೆ. ಏಕೆಂದರೆ ಬೆಳಗ್ಗೆ 4ಕ್ಕೆ ಏಕಾಏಕಿ ವಿದ್ಯುತ್ ಕಡಿತ ಮಾಡಲಾಗಿತ್ತು. ಈ ಸಂದರ್ಭದಲ್ಲಿ ದುರ್ಷರ್ಮಿಗಳು ಹೀಗೆ ಮಾಡಿರಬಹುದು ಎಂದು ಊಹಿಸಲಾಗಿದೆ. ಇದೀಗ ಬೇರೆಯವರನ್ನು ಕರೆಯಿಸಿ ಬೀಗ ತೆರೆಸಲಾಗುತ್ತಿದೆ.

    ಅದರ ವಿಡಿಯೋಗಳು ಇಲ್ಲಿವೆ ನೋಡಿ…

    ಬಿಗ್‌ಬಾಸ್‌-15 ಕುತೂಹಲಕ್ಕೆ ತೆರೆ: ‘ಶಮಿತಾ ಆಂಟಿ’ ವಿವಾದ ಸೃಷ್ಟಿಸಿದ್ದ ನಟಿ ತೇಜಸ್ವಿಗೆ ಒಲಿದ ಕಿರೀಟ

    ಪ್ರಿಯಾಂಕಾ ಗಾಂಧಿಯನ್ನು ‘ಅಕ್ಕ’ ಎನ್ನುತ್ತಿದ್ದ ನಿದಾ ಖಾನ್‌ ಬಿಜೆಪಿಗೆ! ಕಾರಣ ಬಿಚ್ಚಿಟ್ಟ ತ್ರಿವಳಿ ತಲಾಖ್‌ ಸಂತ್ರಸ್ತೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts