More

    ಕರೊನಾ ನೆಗೆಟಿವ್‌ ವರದಿ ಪಡೆದ ಖುಷಿಯಲ್ಲಿರುವಾಗಲೇ ಶಾಸಕನ ಸಾವು- ವೈದ್ಯರು ಹೇಳಿದ್ದೇನು?

    ಕೋಲ್ಕತಾ: ಕರೊನಾ ಸೋಂಕು ತಗುಲಿ ನಂತರ ಗುಣಮುಖರಾಗಿರುವುದಾಗಿ ನೆಗೆಟಿವ್‌ ವರದಿ ಪಡೆದ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಶಾಸಕ ಜಯಂತ್ ನಾಸ್ಕರ್ ಮೃತಪಟ್ಟಿದ್ದಾರೆ. ಇವರು ಮೂರು ಬಾರಿ ಶಾಸಕರಾಗಿದ್ದರು.

    ಮೇ ತಿಂಗಳಿನಲ್ಲಿ ಶಾಸಕ ಜಯಂತ್ ಅವರಿಗೆ ಕರೊನಾ ಸೋಂಕು ತಗುಲಿತ್ತು. ಇವರು ಗೋಸಾಬಾ ವಿಧಾನಸಭಾ ಕ್ಷೇತ್ರದ ಶಾಸಕ. ನಂತರ ಕೋಲ್ಕತಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಅನೇಕ ದಿನ ಚಿಕಿತ್ಸೆ ನೀಡಿದ ಬಳಿಕ ಗುಣಮುಖರಾಗಿರುವುದಾಗಿ ಹೇಳಲಾಗಿತ್ತು. ಕರೊನಾ ಪರೀಕ್ಷೆ ಮಾಡಿದಾಗ ನೆಗೆಟಿವ್‌ ವರದಿ ಬಂದಿತ್ತು.

    ನೆಗೆಟಿವ್‌ ವರದಿ ಬಂದಿದ್ದು, ಕರೊನಾದಿಂದ ಗುಣಮುಖರಾಗಿರುವ ಖುಷಿಯಲ್ಲಿದ್ದರು ನಾಸ್ಕರ್‌. ಆದರೆ ಪುನಃ ಅವರಿಗೆ ಅನಾರೋಗ್ಯ ಬಾಧಿಸಿತು. ನಂತರ ಎಂಆರ್ ಬಂಗೂರ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಖಾಸಗಿ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿತ್ತು.

    ಕರೊನಾ ನೆಗೆಟಿವ್‌ ಬಂದರೂ ಸೋಂಕಿಗೆ ಒಳಗಾಗಿದ್ದು ಹೇಗೆ ಎಂದು ವೈದ್ಯರನ್ನು ಪ್ರಶ್ನಿಸಿದಾಗ ಅವರು ಹೇಳಿದ್ದು, ಶಾಸಕರಿಗೆ ನೆಗೆಟಿವ್‌ ವರದಿ ಬಂದದ್ದು ನಿಜ. ಆದರೆ ಅವರು ಆದರೆ ದೀರ್ಘಕಾಲದ ಅನಾರೋಗ್ಯಕ್ಕೆ ಒಳಗಾಗಿದ್ದು. ಈ ಹಿನ್ನೆಲೆಯಲ್ಲಿ ಶ್ವಾಸಕೋಶ ಹಾನಿಗೊಳಗಾಗಿತ್ತು. ಇದೇ ಕಾರಣಕ್ಕೆ ಅವರು ಮೃತಪಟ್ಟಿದ್ದಾರೆ ಎಂದಿದ್ದಾರೆ.

    ಇಬ್ಬರನ್ನು ಒಟ್ಟಿಗೇ ಲವ್‌ ಮಾಡಿದಾತನಿಗೆ ಡಬಲ್‌ ಧಮಾಕಾ- ಅತ್ತ ಒಬ್ಬಳು, ಇತ್ತ ಇನ್ನೊಬ್ಬಳು!

    ರಾತ್ರೋರಾತ್ರಿ ಫೇಮಸ್‌ ಆಗಿದ್ದ ‘ಬಾಬಾ ಕಾ ಡಾಬಾ’ ಮಾಲೀಕ ಆತ್ಮಹತ್ಯೆಗೆ ಯತ್ನ: ಪರಿಸ್ಥಿತಿ ಗಂಭೀರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts