More

    ಫ್ರೀಯಾಗಿ ಫಾಸ್ಟ್​ ಫುಡ್ ಕೊಡುವಂತೆ ಮಹಿಳೆಗೆ ಬೆದರಿಕೆ ಹಾಕಿದ ತಿಕ್ಲು ಮಂಜ!

    ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಪುಡಿ ರೌಡಿಗಳ ಹಾವಳಿ ಮಿತಿ ಮೀರುತ್ತಿದ್ದ. ಅಂಗಡಿಗೆ ತೆರಳಿ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಧಮ್ಕಿ ಹಾಕಿ, ಹಲ್ಲೆ ಮಾಡುತ್ತಿರುವಂತಹ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ಪುಡಿ ರೌಡಿಗಳು ವ್ಯಾಪಾರಸ್ಥರ ಮೇಲೆ ದರ್ಪ ಮೆರೆದಿರುವ ಘಟನೆಗಳು ಸಾಕಷ್ಟು ನಡೆದಿವೆ. ಇದೀಗ ಉಚಿತವಾಗಿ ಫಾಸ್ಟ್​ಫುಡ್​ ನೀಡಬೇಕೆಂದು ದಮ್ಕಿ ಹಾಕಿ ಮೆರೆದಿದ್ದ ಪುಡಿರೌಡಿಯೊಬ್ಬನಿಗೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

    ಕಳೆದ ಭಾನುವಾರ(ಜ.8) ಸಂಜೆ 6-30ರ ಸುಮಾರಿಗೆ ಅಮೃತಹಳ್ಳಿ ಪೊಲೀಸ್ ಠಾಣೆಯ ರೌಡಿಶೀಟರ್ ಮಂಜುನಾಥ್ ಅಲಿಯಾಸ್ ತಿಕ್ಲಮಂಜ, ಜಕ್ಕೂರು ಗ್ರಾಮದ ಸರ್ಕಲ್ ಬಳಿ ನಾರ್ತ್ ಇಂಡಿಯನ್ ಫಾಸ್ಟ್​ಫುಡ್ ಸೆಂಟರ್ ಒಂದರಲ್ಲಿ ಉಚಿತ ಊಟಕ್ಕಾಗಿ ಡಿಮ್ಯಾಂಡ್ ಮಾಡಿದ್ದ.

    ರೌಡಿ ಶೀಟರ್ ಮಂಜುನಾಥ್, ಫಾಸ್ಟ್​ಫುಡ್ ಆರ್ಡರ್ ಮಾಡಿದಾಗ ಶೀತಲ್ ಎಂಬ ಯುವತಿ ಮತ್ತು ಕೆಲಸಗಾರ ರಾಜು ಮಾತ್ರ ಫುಡ್ ಸೆಂಟರ್​​ನಲ್ಲಿದ್ದರು‌. ಈ ವೇಳೆ ರಾಜು ಎಂಬ ಕೆಲಸಗಾರನನ್ನು ನಿಂದಿಸಿ, ಹಲ್ಲೆ ನಡೆಸಿದ್ದ. ನಂತರ ಶೀತಲ್ ಎಂಬ ಯುವತಿಗೆ ಕೆಟ್ಟದಾಗಿ ಬೈಯ್ದು, ಕೈಯಿಂದ ತಳ್ಳಿ ಕೊಲೆ ಬೆದರಿಕೆ ಹಾಕಿದ್ದ.

    ಘಟನೆಯ ನಂತರ ಅಂಗಡಿಯಾತ ವಿಕಾಸ್ ಕುಮಾರ್ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ರೌಡಿ ಶೀಟರ್ ಮಂಜುನಾಥ್ ಫಾಸ್ಟ್​ಫುಡ್ ಸೆಂಟರ್​ನಲ್ಲಿ ಕುಡಿದ ಮತ್ತಿನಲ್ಲಿ ದಾಂಧಲೆ ಮಾಡಿ, ಬೆದರಿಕೆ ಹಾಕಿರುವುದು ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

    ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ರೌಡಿಶೀಟರ್ ಮಂಜುನಾಥ್​ ಬಂಧನಕ್ಕೆ ಬಲೆ ಬೀಸಿದ್ದಾರೆ. ಅದರಂತೆ ಮಂಗಳವಾರ(ಜ.10) ಮಂಜುನಾಥ್ ಅಲಿಯಾಸ್ ತಿಕ್ಲು ಮಂಜನನ್ನು ಬಂಧಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts