More

    ರೌಡಿಶೀಟರ್ ಗಡಿಪಾರು

    ಧಾರವಾಡ: ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಇಲ್ಲಿನ ಶ್ರೀರಾಮನಗರದ ರೌಡಿಶೀಟರ್ ಅಜಯ ಪರುಶುರಾಮ ಕೊರವರ (30) ಎಂಬಾತನನ್ನು ಗಡಿಪಾರು ಮಾಡಿ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ.

    ನಗರದ ವಿದ್ಯಾಗಿರಿ ಠಾಣೆ ವ್ಯಾಪ್ತಿಯ ಅಜಯ, ಮುಗ್ದ ಜನರನ್ನು ಬೆದರಿಸುವುದು, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಮಧ್ಯಪ್ರವೇಶಿಸಿ ಆಸ್ತಿ ಕಬಳಿಸುವುದು, ಸಾರ್ವಜನಿಕರಲ್ಲಿ ಭಯ ಹುಟ್ಟುಸುವಂಥ ಪ್ರವೃತ್ತಿ ಹೊಂದಿದ್ದರು. ಈತನ ವಿರುದ್ಧ ವಿದ್ಯಾಗಿರಿ ಠಾಣೆಯಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ಈತನ ವಿರುದ್ಧ ರೌಡಿಶೀಟರ್ ತೆರೆಯಲಾಗಿತ್ತು. ಆದರೂ ಕಾನೂನುಬಾಹಿರ ಚಟುವಟಿಕೆ ಮುಂದುವರಿಸಿದ್ದರಿ೦ದ 6 ತಿಂಗಳ ಕಾಲ ಕೋಲಾರ ಜಿಲ್ಲೆ ಮುಳಬಾಗಿಲ ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ. ಈ ರೀತಿ ರೌಡಿಸಂ ಪ್ರವೃತ್ತಿ ತೋರಿದವರ ವಿರುದ್ಧ ಕಠಿಣ ಕ್ರಮ ನಿಶ್ಚಿತ ಎಂದು ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts