More

    ಅಭಿಮಾನಿಗಳು ಬಯಸಿದ್ದನ್ನು ನೀಡಲು ಮುಂದಾದ ರಾಬರ್ಟ್​ ಬಳಗ!

    ಬೆಂಗಳೂರು: ಎಲ್ಲ ಅಂದುಕೊಂಡಂತೆ ಆಗಿದ್ದರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ರಾಬರ್ಟ್’ ಸಿನಿಮಾ ಏ. 9ಕ್ಕೆ ತೆರೆಕಾಣಬೇಕಿತ್ತು. ಆದರೆ, ಕರೊನಾ ಹಾವಳಿಯಿಂದಾಗಿ ಸಿನಿಮಾ ಬಿಡುಗಡೆಯನ್ನು ಚಿತ್ರತಂಡ ಮುಂದೂಡಿತ್ತು. ಚಿತ್ರತಂಡದ ಈ ನಿರ್ಧಾರಕ್ಕೆ ಅಭಿಮಾನಿಗಳೂ ಖುಷ್ ಆದರು. ಆದರೆ, ಇನ್ನೊಂದು ಕಡೆ ಅಷ್ಟೇ ಬೇಸರವೂ ಆಗಿತ್ತು. ಮತ್ತೊಂದು ಟೀಸರ್ ಅಥವಾ ಹಾಡನ್ನು ಬಿಡುವಂತೆ ಜಾಲತಾಣದಲ್ಲಿ ದರ್ಶನ್ ಅಭಿಮಾನಿಗಳು ದೊಡ್ಡ ಅಭಿಯಾನವನ್ನೇ ಆರಂಭಿಸಿದ್ದರು. ಅದರಂತೆ ಈಗ ರಾಬರ್ಟ್ ತಂಡದಿಂದ ಸಿಹಿ ಸುದ್ದಿಯೊಂದು ಬಂದಿದೆ. ರಾಮನವಮಿ ಪ್ರಯುಕ್ತ ಏ.2ರ ಸಂಜೆ ಜೈ ಶ್ರೀರಾಮ್ ಹಾಡಿನ ಹೊಸ ವರ್ಷನ್ ಬಿಡುಗಡೆ ಮಾಡುವುದಾಗಿ ಚಿತ್ರದ ನಿರ್ದೇಶಕ ತರುಣ್ ಸುಧೀರ್ ಹೇಳಿದ್ದಾರೆ.
    ಮಾರ್ಚ್ 9ರಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಕೇವಲ 3.54 ನಿಮಿಷದ ಜೈ ಶ್ರೀರಾಮ್ ಸಾಹಿತ್ಯದ ಲಿರಿಕಲ್ ಹಾಡು ಬಿಡುಗಡೆ ಆಗಿತ್ತು. ಆಂಜನೇಯನಾಗಿ ದರ್ಶನ್ ಕಾಣಿಸಿಕೊಂಡರೆ, ಬಾಲ ಶ್ರೀರಾಮನಾಗಿ ಮಾಸ್ಟರ್ ಜೇಸನ್ ನಟಿಸಿದ್ದರು. ಈಗ ಅದರ ಮುಂದುವರಿದ ಭಾಗವನ್ನು ಕೇಳಿಸಲು ಚಿತ್ರತಂಡ ಸಜ್ಜಾಗಿದೆ. ಈಗಾಗಲೇ ಬಿಡುಗಡೆ ಆಗಿರುವ ಹಾಡಿಗೆ ಮೆಚ್ಚುಗೆ ದೊರೆತಿದ್ದು, 16ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೊಳಪಟ್ಟಿದೆ. ಉಮಾಪತಿ ಶ್ರೀನಿವಾಸ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

    ಲಾಕ್​ಡೌನ್​ ಆದರೂ ಈ ಸಿನಿಮಾ ಇನ್ನೂ ಓಡುತ್ತಿದೆ! ಚಿತ್ರ ತೆರೆಕಂಡು ವರ್ಷಗಳು ಉರುಳಿದರೂ ಟಿಕೆಟ್​ ಹಣ ಬರುತ್ತಿದೆ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts