ಲಖನೌ: ಪ್ರೀತಿಯ ಮಗ ನೆರೆ ಮನೆಯವರೊಂದಿಗೆ ಜಗಳವಾಡಿಕೊಂಡಿದ್ದನ್ನು ಕಂಡು ಮನನೊಂದ ತಂದೆ ತಲೆಗೆ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಜಲಾನ್ನಲ್ಲಿ ನಡೆದಿದೆ. ಮೃತ ವ್ಯಕ್ತಿಯು ಪೊಲೀಸ್ ಇಲಾಖೆಯಲ್ಲಿ ಮುಖ್ಯ ಪೇದೆಯಾಗಿ ಕೆಲಸ ಮಾಡಿ ನಿವೃತ್ತಿ ಪಡೆದಿದ್ದ.
ಶ್ಯಾಮಚರಣ್ ಚತುರ್ವೇದಿ ಮೃತ ವ್ಯಕ್ತಿ. ಈತ ತನ್ನ ಮನೆಯಲ್ಲಿ ಬುಧವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಪರವಾನಗಿ ಪಡೆದ ರೈಫಲ್ನಿಂದ ಗುಂಡು ಹಾರಿಸಿಕೊಂಡು ಪ್ರಾಣ ಬಿಟ್ಟಿದ್ದಾನೆ. ಇತ್ತೀಚೆಗೆ ಶ್ಯಾಮಚರಣ್ ಅವರ ಮಗ ಮತ್ತು ಅವರ ನೆರೆಹೊರೆಯವರಿಗೆ ಜಗಳವಾಗಿತ್ತಂತೆ. ಈ ವಿಚಾರವಾಗಿ ಅವರ ಮಗ ಪೊಲೀಸ್ ದೂರನ್ನೂ ನೀಡಿದ್ದನಂತೆ. ಆದರೆ ಪೊಲೀಸರು ಅದರ ಬಗ್ಗೆ ಹೆಚ್ಚಿನ ಗಮನ ಕೊಟ್ಟಿಲ್ಲ. ಅದೇ ಕಾರಣಕ್ಕೆ ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಪತ್ನಿ ಆರೋಪಿಸಿದ್ದಾರೆ. (ಪಿಟಿಐ)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
ನಿರ್ಮಾಪಕ ಅನುರಾಗ್ ಕಶ್ಯಪ್ & ನಟಿ ತಾಪ್ಸಿ ಪನ್ನುಗೆ ಐಟಿ ಶಾಕ್! ದಾಳಿ ನಡೆಸಿದ ಅಧಿಕಾರಿಗಳು
ಮೋದಿಯವರ ಭಾಷಣ ಬರೆಯುವವರು ಯಾರು? ಅವರಿಗೆ ಎಷ್ಟು ಸಂಬಳ ಕೊಡಲಾಗುತ್ತಿದೆ?