More

    ಸಂವಿಧಾನದ ಆಶಯ ಸಾಕಾರಗೊಳ್ಳಲಿ

    ದಾವಣಗೆರೆ: ಜಾತ್ಯತೀತ ಮತ್ತು ಸಮ ಸಮಾಜದ ನಿರ್ಮಾಣವೇ ಗಣರಾಜ್ಯ ಹಾಗೂ ಸಂವಿಧಾನದ ಮುಖ್ಯ ಆಶಯವಾಗಿದೆ. ಇದಕ್ಕೆ ತಕ್ಕಂತೆ ನಾವು ಕಾರ್ಯಶೀಲರಾಗಬೇಕಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
     
    ಜಿಲ್ಲಾಡಳಿತದಿಂದ ಭಾನುವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಗಣರಾಜ್ಯೋತ್ಸವದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

    ಭಾರತದ ಸಂವಿಧಾನವು ಕಠಿಣ ಪರಿಸ್ಥಿತಿಯ ಸಂದರ್ಭಗಳಲ್ಲಿ ಹಾಗೂ ಬದಲಾವಣೆಗಳ ನಡುವೆಯೂ ಸದೃಢತೆ ಹಾಗೂ ತನ್ನ ಮೂಲ ಸಂರಚನೆಯನ್ನು ಕಾಪಾಡಿಕೊಂಡು ಬಂದಿದೆ. ಸಂವಿಧಾನದ ಆಶಯಕ್ಕೆ ತಕ್ಕಂತೆ ದೇಶ ಪ್ರಗತಿ ಸಾಧಿಸುತ್ತಿದೆಯೆ ಎಂಬುದನ್ನು ಅವಲೋಕಿಸಬೇಕಿದೆ ಎಂದರು.
     
    ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯ ಬಂದಿದೆ. ಸಂವಿಧಾನದ ಒಳಿತು, ಕೆಡುಕು ಅದನ್ನು ಆಚರಣೆಗೆ ತರುವ ಜನರ ಮೇಲೆ ಅವಲಂಭಿತವಾಗಿದೆ ಎಂಬ ಅಂಬೇಡ್ಕರ್ ಅವರ ಮಾತುಗಳನ್ನು ನಾವು ಸ್ವೀಕರಿಸಿ, ಸಂವಿಧಾನದ ಆಶಯಗಳನ್ನು ಈಡೇರಿಸಬೇಕಾಗಿದೆ ಎಂದರು.
     
    ಚಿಕಾಗೋ ವಿವಿ ಲೆಕ್ಕಾಚಾರದ ಪ್ರಕಾರ ಸಂವಿಧಾನಗಳ ಸರಾಸರಿ ಆಯುಷ್ಯ 17 ವರ್ಷ ಮಾತ್ರ. ಅಧ್ಯಯನವೊಂದರ ಪ್ರಕಾರ ಸಸಂವಿಧಾನಗಳ ಪೈಕಿ ಶೇ. ಏಳರಷ್ಟು ಸಂವಿಧಾನಗಳು 2 ವರ್ಷಾವಧಿಯೊಳಗೆ ಕಳೆದುಹೋಗಲಿವೆ. ಆದರೆ ಭಾರತ ಸಂವಿಧಾನ ಇಂದಿಗೂ ಉಳಿದಿದೆ. ಜನಮನದಲ್ಲಿ ಅದಕ್ಕೆ ಪವಿತ್ರ ಸ್ಥಾನವಿದೆ. ಏಳು ದಶಕಗಳ ಕಾಲ ಉಳಿದು ಬಂದಿರುವುದೇ ದೊಡ್ಡ ಸಾಧನೆ ಎಂದರು.
     
    ದೆಹಲಿಯ ರಾಜಪಥ್‌ನಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಅಖಿಲ ಭಾರತ ಹಿರಿಯ ವಿಭಾಗದ ಎನ್‌ಸಿಸಿ ಪೆರೇಡ್‌ನ ಮುಂದಾಳತ್ವ ವಹಿಸಿದ ಹರಿಹರದ ಎಂ.ಪಿ.ಶ್ರೀಷ್ಮಾ ಹೆಗ್ಡೆ ಹಾಗೂ ರಾಷ್ಟ್ರಪತಿಗಳ ವಿಶಿಷ್ಟ ಪದಕ ಪಡೆದ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ.ಬಿ.ಎಚ್.ವೀರಪ್ಪ ಅವರ ಹೆಸರನ್ನು ಪ್ರಸ್ತಾಪಿಸಿ ಅಭಿನಂದಿಸಿದರು.
     
    ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಎಸ್.ಎ.ರವೀಂದ್ರನಾಥ್, ಎಂಎಲ್ಸಿ ಅಬ್ದುಲ್ ಜಬ್ಬಾರ್, ಜಿಪಂ ಅಧ್ಯಕ್ಷೆ ಯಶೋದಮ್ಮ ಮರುಳಪ್ಪ, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಎಸ್ಪಿ ಹನುಮಂತರಾಯ, ಜಿಪಂ ಸಿಇಒ ಪದ್ಮಾ ಬಸವಂತಪ್ಪ, ಎಸಿ ಮಮತಾ ಹೊಸಗೌಡರ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ತಹಸೀಲ್ದಾರ್ ಸಂತೋಷ್‌ಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts