More

    ಕಿತ್ತೆದ್ದ ಡಾಂಬರ್ ರಸ್ತೆ ದುರಸ್ತಿಪಡಿಸಿ

    ಕೊಪ್ಪ: ಪಟ್ಟಣಕ್ಕೆ ಹೊಂದಿಕೊಂಡಿರುವ ಬೇಲಿಹಳ್ಳಿ ರಸ್ತೆಯ ಡಾಂಬರು ಸಂಪೂರ್ಣ ಕಿತ್ತುಹೋಗಿದೆ.

    ಗಿಡಗಳು ರಸ್ತೆಗೆ ಚಾಚಿಕೊಂಡಿವೆ. ರಸ್ತೆಯಲ್ಲಿ ರಾತ್ರಿ ವೇಳೆ ಓಡಾಡಲು ಕಷ್ಟವಾಗುತ್ತದೆ. ಪಪಂ ರಸ್ತೆ ದುರಸ್ತಿ ಮಾಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ತ್ಯಾಗರಾಜ ರಸ್ತೆಯಿಂದ ಬೇಲಿಹಳ್ಳಿಗೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಸ್ತೆಯ ಡಾಂಬರು ಕಿತ್ತುಹೋಗಿ ರಸ್ತೆಯಲ್ಲೇ ಗಿಡಗಳು ಬೆಳೆಯಲು ಆರಂಭವಾಗಿದೆ. ರಸ್ತೆಯ ಒಂದು ಬದಿಗೆ ಚರಂಡಿ ಇಲ್ಲ. ರಸ್ತೆಯಲ್ಲಿಯೇ ನೀರು ಹರಿದುಹೋಗುತ್ತದೆ. ಬೇಲಿಯಲ್ಲಿರುವ ಗಿಡಗಳು ರಸ್ತೆಗೆ ಚಾಚಿವೆ. ಆಟೋ ಇನ್ನಿತರ ವಾಹನಗಳು ಈ ರಸ್ತೆಯಲ್ಲಿ ಓಡಾಡದ ಸ್ಥಿತಿ ನಿರ್ಮಾಣವಾಗಿದೆ ಎಂದು ನಿವೃತ್ತ ಶಿಕ್ಷಕ ಎಚ್.ಎಸ್.ಶಿವಸ್ವಾಮಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts