More

    ಹೇಳಿದ್ದೇ ಒಂದು, ಮಾಡಿದ್ದೇ ಇನ್ನೊಂದು; ಸುಶಾಂತ್​ ಸಿಂಗ್​ ಬದುಕಲ್ಲಿ ರೀಲು​ ರಿಯಲ್ಲಾಗಲಿಲ್ಲ…

    ಮುಂಬೈ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವು ಆತ್ಮಹತ್ಯೆಯಿಂದಾಗಿ ಎನ್ನುವುದು ಪೊಲೀಸರ ಹೇಳಿಕೆ. ಅದಕ್ಕೆ ಕಾರಣವೇನು ಎನ್ನುವುದನ್ನು ಪೊಲಿಸರು ಇನ್ನಷ್ಟೇ ಖಚಿತಪಡಿಸಬೇಕಿದೆ.

    ಆದರೆ, ಸುಶಾಂತ್​ ಸಿಂಗ್​ ತನ್ನ ಇತ್ತೀಚಿನ ಚಿತ್ರಗಳಿಂದ ನೀಡಿದ ಸಂದೇಶವೇನು? ಜೀವನೋತ್ಸಾಹವನ್ನೇ ಪ್ರತಿಪಾದಿಸುತ್ತಿದ್ದ ಸಿನಿಮಾಗಳಲ್ಲಿ ನಾಯಕನದ್ದು ಪ್ರೇರಣಾದಾಯಿ ವ್ಯಕ್ತಿತ್ವ. ಆದರೆ, ನಿಜ ಜೀವನದಲ್ಲಿ ಈ ನಾಯಕ ಸೋತದ್ದೇಕೆ? ಇದು ನಿಜಕ್ಕೂ ಕೆಟ್ಟ ಸಂದೇಶ ಎಂದೇ ಸಾಮಾಜಿಕ ಜಾಲತಾಣಗಳಲ್ಲಿ ನಟನ ಕುರಿತು ಬರುತ್ತಿರುವ ಕಾಮೆಂಟ್​ಗಳ ಸಾರಾಂಶವಾಗಿದೆ.

    ಎಂ.ಎಸ್​. ಧೋನಿ; ಅನ್​ಟೋಲ್ಡ್​ ಸ್ಟೋರಿಯಲ್ಲಿ ಸುಶಾಂತ್​ ಹೇಳಿದ್ದು, ಬದುಕಿನಲ್ಲೇ ಎಂಥದ್ದೇ ಕಷ್ಟ ಎದುರಾದರೂ ಹಿಂಜರಿಯಬಾರದು. ಗುರಿಯಿಂದ ವಿಚಲಿತರಾಗಬಾರದು. ಹಾಗಿದ್ದರಷ್ಟೇ ಯಶಸ್ಸು ನಮ್ಮದಾಗುತ್ತದೆ ಎಂಬ ಸಂದೇಶ ಚಿತ್ರದ್ದಾಗಿತ್ತು. ಕೇದಾರನಾಥ್​ ಚಿತ್ರದಲ್ಲಿ ಯಾವುದೇ ಧರ್ಮವಾದರೂ ಸ್ವಾರ್ಥ ಇರಕೂಡದು ಎಂಬುದನ್ನು ಸಾರುತ್ತಿತ್ತು.

    ಇದನ್ನೂ ಓದಿ; ಜೂನ್​ 15ರಿಂದ ಮತ್ತೊಮ್ಮೆ ದೇಶಾದ್ಯಂತ ಸಂಪೂರ್ಣ ಲಾಕ್​ಡೌನ್​ ; ಇಲ್ಲಿದೆ ಫ್ಯಾಕ್ಟ್​ಚೆಕ್​ 

    ಇನ್ನು, ಚಿಚೋರೆ ಚಿತ್ರದಲ್ಲಿ ಆತ್ಮಹತ್ಯೆಗೆ ಮುಂದಾಗಿ ಮರಣಶಯ್ಯೆಯಲ್ಲಿರುವ ಮಗನನ್ನು ಉಳಿಸಿಕೊಳ್ಳಲು ತನ್ನ ಜೀವನವೇ ನಿನಗೊಂದು ಪಾಠವೆಂದು ಗತಕಾಲದ ಜೀವನವನ್ನೆಲ್ಲ ನಿರೂಪಿಸುತ್ತಾನೆ. ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ ಎಂಬುದನ್ನು ತಿಳಿಸುತ್ತಾನೆ. ಅಂಥದದ್ದರಲ್ಲಿ, ನಿಜ ಜೀವನದಲ್ಲಿ ಸುಶಾಂತ್​ ಮಾಡಿದ್ದೇನು ಎಮದು ನೆಟ್ಟಿಗರು ಕಂಬನಿ ಮಿಡಿದಿದ್ದಾರೆ.

    ಯಶಸ್ಸಿನ ಬಳಿಕ ಏನು ಮಾಡಬೇಕು ಎಂಬ ಯೋಜನೆ ಎಲ್ಲರ ಬಳಿಯೂ ಇದೆ. ಆದರೆ, ಸೋತರೆ ಅದನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಯಾರೂ ಮಾತನಾಡಲು ಇಷ್ಟಪಡುವುದಿಲ್ಲ ಎನ್ನುವುದು ಚಿಚೋರೆ ಚಿತ್ರದ ಫೇಮಸ್​ ಡೈಲಾಗ್​ ಹಾಗೂ ತಿರುಳು ಕೂಡ ಹೌದು. ಇದಕ್ಕೆ ವಿರುದ್ಧವಾಗಿ ಸುಶಾಂತ್​ ಸಿಂಗ್​ ನಡೆದುಕೊಂಡರಲ್ಲ ಎಂದು ಅಭಿಮಾನಿಯೊಬ್ಬ ಕಣ್ಣೀರು ಹಾಕಿದ್ದಾನೆ.

    ಇದನ್ನೂ ಓದಿ; ಮಹಿಳೆಯರಿಗಿನ್ನು ಹದಿನೆಂಟಲ್ಲ, ಮದುವೆ ವಯಸ್ಸು 21…!

    ಆತ್ಮಹತ್ಯೆಗೆ ಶರಣಾಗಬಾರದು ಎಂದು ಹೇಳಿದ ವ್ಯಕ್ತಿಯೇ ಅದಕ್ಕೆ ಬಲಿಯಾದರೆ…? ಬದುಕು ಅಷ್ಟೊಂದು ಸಂಕೀರ್ಣವೇ ಎಂದು ಮತ್ತೊಬ್ಬ ಪ್ರಶ್ನಿಸಿದ್ದಾನೆ.

    ರಾಷ್ಟ್ರಮಟ್ಟದ ಎಐಇಇಇ ಪರೀಕ್ಷೆಯಲ್ಲಿ 7ನೇ ಸ್ಥಾನ, ಭೌತಶಾಸ್ತ್ರದಲ್ಲಿ ರಾಷ್ಟ್ರೀಯ ಒಲಿಂಪಿಯಾಡ್​ ವಿನ್ನರ್​, ಚೊಚ್ಚಲ ಚಿತ್ರದಲ್ಲಿ ಉತ್ತಮ ನಟ ಪ್ರಶಸ್ತಿಗೆ ನಾಮ ನಿರ್ದೇಶನ, ಉತ್ತಮ ನಟ ಪ್ರಶಸ್ತಿಗೆ ನಾಮ ನಿರ್ದೇಶನ ಮೊದಲಾದ ಸಾಧನೆಗಳ ಮೂಲಕ ಮಧ್ಯಮ ವರ್ಗದ ಕುಟುಂಬಕ್ಕೆ ಕುಟುಂಬಕ್ಕೆ ಯಾವುದು ಅಸಾಧ್ಯವಲ್ಲ ಎಂಬುದನ್ನು ತೋರಿಕೊಟ್ಟ ಸುಶಾಂತ್​ ಸಿಂಗ್​ ಎಂದು ಅಭಿಮಾನಿಗಳು ಸುಶಾಂತ್​ನನ್ನು ಕೊಂಡಾಡಿದ್ದಾರೆ. ಆದರೆ, ಆತ್ಮಹತ್ಯೆ ಮೂಲಕ ಅವರು ತಿಳಿಸಿದ್ದೇನು ಎನ್ನುವುದು ಕೂಡ ಚರ್ಚೆಯಾಗುತ್ತಿದೆ.

    ಬದುಕು ಕ್ಷಣಿಕ ಎಂದಿದ್ದೇಕೆ ಸುಶಾಂತ್​ ಸಿಂಗ್​; ಅಮ್ಮನ ನೆನೆದು ಬಾರದ ಲೋಕಕ್ಕೆ ಪಯಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts