More

    ಈಗಲೂ ಪತ್ರಿಕೆಗಳನ್ನು ಓದುವುದು ಸುರಕ್ಷಿತ: ಕೇಂದ್ರ ಆರೋಗ್ಯ ಸಚಿವರ ಸ್ಪಷ್ಟನೆ…

    ನವದೆಹಲಿ: ಕೋವಿಡ್​-19 ವೈರಸ್​ ರೂಪಾಂತರ (ಮ್ಯುಟೇಷನ್​) ಆಗುತ್ತಿದೆ, ಅದೇ ಕಾರಣಕ್ಕೆ ಮತ್ತೊಂದು ಅಲೆ ಕಾಣಿಸುತ್ತಿದೆ, ಅದಕ್ಕೇ ಸೋಂಕು ವ್ಯಾಪಿಸುತ್ತಿದೆ ಎಂಬೆಲ್ಲ ಅಭಿಪ್ರಾಯಗಳು ಹರಿದಾಡುತ್ತಿದ್ದು, ಇದೀಗ ಆ ಆತಂಕಗಳನ್ನು ನಿವಾರಿಸುವಂಥ ಹೇಳಿಕೆಯೊಂದು ಆರೋಗ್ಯ ಇಲಾಖೆ ನೀಡಿದೆ.

    ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್​ ‘ಸಂಡೇ ಸಂವಾದ್’ ಕಾರ್ಯಕ್ರಮದಲ್ಲಿ ಮಾತನಾಡಿ, ಕೋವಿಡ್​ ವೈರಸ್​ ರೂಪಾಂತರಗೊಂಡು ಹೆಚ್ಚಿನ ಸೋಂಕುಕಾರಕವಾಗಿ, ಹೆಚ್ಚು ವೇಗವಾಗಿ ಹರಡುವಂತಾಗಿದೆ ಎಂಬುದಕ್ಕೆಲ್ಲ ಸದ್ಯ ಆಧಾರವಿಲ್ಲ. ಅದರಲ್ಲೂ ಪತ್ರಿಕೆಗಳ ಮೂಲಕ ಕರೊನಾ ಹರಡುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳಿಲ್ಲ. ಸದ್ಯ ಕರೊನಾ ಪಿಡುಗಿನ ಈ ಕಾಲದಲ್ಲೂ ಪತ್ರಿಕೆಗಳನ್ನು ಓದುವುದು ಸಂಪೂರ್ಣ ಸುರಕ್ಷಿತ ಎಂದು ಹೇಳಿದ್ದಾರೆ.

    ಭಾರತದಲ್ಲಿ ಇನ್ನೂ ಕರೊನಾ ವೈರಸ್​ ರೂಪಾಂತರ ಪತ್ತೆಯಾಗಿಲ್ಲ. ಆರನೇ ‘ಸಂಡೇ ಸಂವಾದ್’ ಕಾರ್ಯಕ್ರಮದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ತುಂಬ ಪ್ರಶ್ನೆಗಳು ಕೇಳಿಬಂದ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.

    Reddit

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts