ಪಟನಾ: ಬಿಹಾರದ ಪತ್ರಕರ್ತ ರಾಜದೇವ್ ರಂಜನ್ ಹತ್ಯೆ ಪ್ರಕರಣದಲ್ಲಿ ಹೊಸ ಟ್ವಿಸ್ ಸಿಕ್ಕಿದೆ. ಕೇಂದ್ರೀಯ ತನಿಖಾ ದಳ (ಸಿಬಿಐ) ದಿಂದಲೇ ಮೃತ ಘೋಷಿಸಲ್ಪಟ್ಟಿದ್ದ ವೃದ್ಧೆ ಬದುಕಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಪ್ರಕರಣದಲ್ಲಿ ಈಕೆ ಸಾವನ್ನಪ್ಪಿದ್ದಾಗಿ ವರದಿ ನೀಡಲಾಗಿತ್ತು. ಅಲ್ಲದೇ ನ್ಯಾಯಾಲಯಕ್ಕೂ ಸಿಬಿಐ ಈ ವೃದ್ಧೆ ಮಹಿಳೆ ಮೃತಪಟ್ಟಿರುವ ಮರಣ ಪತ್ರವನ್ನು ಸಹ ಸಲ್ಲಿಸಿದ್ದರು. ಆದರೆ ಈಗ ಆಗಿದ್ದೇ ಬೇರೆ.
ಇಷ್ಟೆಲ್ಲಾ ಆದಮೇಲೂ ಶನಿವಾರ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯದ ಮುಂದೆ ಮಹಿಳೆ ಹಾಜರಾಗಿದ್ದಾರೆ. ಸ್ವಾಮಿ.. ನಾನು ಬದುಕಿದ್ದೇನೆ. ಎಂದು ಹೇಳಿದ್ದು, ಸಿಬಿಐ ಅಧಿಕಾರಿಗಳೇ ಶಾಕ್ ಆಗಿದ್ದಾರೆ.
ಪತ್ರಕರ್ತ ರಂಜನ್ ಕೊಲೆ ಪ್ರಕರಣದಲ್ಲಿ ಬಾದಾಮಿ ದೇವಿ ಎಂಬ ವೃದ್ಧ ಮಹಿಳೆ ಸಾಕ್ಷಿಯಾಗಿದ್ದಾರೆ. ಮೇ 24 ರಂದು ಸಿಬಿಐ ಈಕೆ ಮೃತಪಟ್ಟಿದ್ದಾಳೆ ಎಂದು ವರದಿ ಸಲ್ಲಿಸಿದ್ದಾರೆ. ಆದರೆ ಇಂದು ಏಕಾಏಕಿ ನ್ಯಾಯಾಲಯದ ಮುಂದೆ ಹಾಜರಾಗುವ ಮೂಲಕ ಸಿಬಿಐ ಅಧಿಕಾರಿಗಳನ್ನೇ ದಿಗ್ಭ್ರಮೆ ಮೂಡಿಸಿದ್ದಾರೆ. ಸದ್ಯ ಅಧಿಕಾರಿಗಳಿಗೆ ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕೆಂದು ನ್ಯಾಯಾಲಯ ಸೂಚಿಸಿದೆ.
ಇನ್ನು ಪ್ರಕರಣದಲ್ಲಿ ಸಾಕ್ಷಿಯಾಗಿದ್ದ ಈಕೆ ಮೇಲೂ ಹಲ್ಲೆ ನಡೆಯುವ ಸಾಧ್ಯತೆ ಇದ್ದುದರಿಂದ ತನ್ನ ಮನೆ ತೊರೆದು ಬೇರೆಡೆ ವಾಸಿಸುತ್ತಿದ್ದಳು. ಈಗ ಪ್ರಕರಣ ವಿಚಾರಣೆ ವೇಳೆ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ. (ಏಜೆನ್ಸೀಸ್)
ನಕಲಿ ಚಾಲಕರಿದ್ದಾರೆ: ಸಿಲಿಕಾನ್ ಸಿಟಿಯಲ್ಲಿ ರಾತ್ರಿ ವೇಳೆ ಆಟೋ ಹತ್ತುವ ಮುನ್ನ ಎಚ್ಚರ!