More

    ಸಂಭ್ರಮದ ಶಂಭುಲಿಂಗೇಶ್ವರ ದೇವರ ರಥೋತ್ಸವ

    ಕುಂದಗೋಳ: ಪಟ್ಟಣದ ಶಿವಾಜಿನಗರ ಕಿಲ್ಲಾ ಓಣಿಯ ಶಂಭುಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ನಿಮಿತ್ತ ಸೋಮವಾರ ಸದ್ಭಕ್ತರ ಹಷೋದ್ಘಾರ ಮಧ್ಯೆ ಸಂಭ್ರಮದ ರಥೋತ್ಸವ ಜರುಗಿತು.

    ಪಟ್ಟಣದ ಶಿವಾನಂದ ಮಠದ ಶ್ರೀ ಮಹಾಂತ ಸ್ವಾಮೀಜಿ, ಕಲ್ಯಾಣಪುರ ಮಠದ ಶ್ರೀ ಬಸವಣ್ಣಅಜ್ಜನವರು ರಥೋತ್ಸವಕ್ಕೆ ಚಾಲನೆ ನೀಡಿದರು. ನಂತರ ಭಕ್ತರು ಹರಹರ ಮಹಾದೇವ ಎಂದು ಜಯಘೊಷ ಹಾಕುತ್ತ ಜಾಂಜಮೇಳ, ಸಂಗೀತ ವಾದ್ಯ ಮೇಳಗಳೊಂದಿಗೆ ಭಕ್ತಿಭಾವದಿಂದ ಭಕ್ತರು ಉತ್ತತ್ತಿ, ಬಾಳೆಹಣ್ಣುಗಳನ್ನು ಎಸೆದು ನಮನ ಸಲ್ಲಿಸಿದರು.

    ಶಂಭುಲಿಂಗೇಶ್ವರ ಆವರಣದಿಂದ ಕಿಲ್ಲಾದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ದೇವಸ್ಥಾನದ ಆವರಣಕ್ಕೆ ತಲುಪಿತು. ಇದಕ್ಕೂ ಮುನ್ನ ಬೆಳಗ್ಗೆ ಜಾತ್ರಾ ಮಹೋತ್ಸವ ಪ್ರಯುಕ್ತ ಶಂಭುಲಿಂಗೇಶ್ವರ ಮೂರ್ತಿಗೆ ರುದ್ರಾಭಿಷೇಕ, ವಿಶೇಷ ಅಲಂಕಾರಿಕ ಪೂಜೆ, ಧಾರ್ವಿುಕ ಕಾರ್ಯದಲ್ಲಿ ಭಕ್ತರು ಪಾಲ್ಗೊಂಡಿದ್ದರು. ಮಧ್ಯಾಹ್ನ ಸಾಮೂಹಿಕ ಅನ್ನ ಸಂತರ್ಪಣೆ ನಡೆಯಿತು.

    ಅರ್ಚಕರಾದ ವಿಠ್ಠಲ ಹಂಪಿಹಳಿ, ಅರವಿಂದ ಕಟಗಿ, ರಾಜು ಕೊಪ್ಪದ, ಮಲ್ಲಿಕಾರ್ಜುನ ಕುನ್ನೂರ, ಶಿವಾನಂದ ಕಟಗಿ, ಮಹದೇವಪ್ಪ ಬಮ್ಮಸಮುದ್ರ, ಮಲ್ಲಿಕಾರ್ಜುನ ಕಿರೇಸೂರ, ಗೌಡಪ್ಪ ಅವ್ವಾರಿ, ಪ್ರವೀಣ ಕಿರೇಸೂರ, ಆನಂದ ಕಟಗಿ, ವೀರೇಶ ರವದಿ, ಭರತ್ ಕಟಗಿ,ನಾಗರಾಜ ಕಟಗಿ, ವಿಕಾಸ ಕಿರೇಸೂರ, ಬಸವಸೇನಾ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts