More

    ರತನ್​ ಟಾಟಾಗೆ ‘ಭಾರತ ರತ್ನ’ ಕೊಡಬೇಕು ಎಂದು ಒತ್ತಾಯಿಸಿದ ಆಂಧ್ರದ ಸಂಸದ…

    ಆಂಧ್ರಪ್ರದೇಶ: ನಿನ್ನೆ, ರತನ್ ಟಾಟಾ ಅವರಿಗೆ 85 ವರ್ಷ ತುಂಬಿದ ಹಿನ್ನೆಲೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸಂಸದ ರಘು ರಾಮಕೃಷ್ಣ ರಾಜು, ಉದ್ಯಮಿ ಟಾಟಾಗೆ ಭಾರತ ರತ್ನ ನೀಡಬೇಕೆಂದು ಒತ್ತಾಯಿಸಿದರು. ರತನ್ ಟಾಟಾ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡುವಂತೆ ಆಗ್ರಹಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಪತ್ರ ಕೂಡ ಬರೆದಿದ್ದಾರೆ.

    “ಹಲವಾರು ಕೋಟ್ಯಧಿಪತಿಗಳು ಈ ಭೂಮಿಯಲ್ಲಿ ಹುಟ್ಟುತ್ತಾರೆ ಆದರೆ ಶಾಶ್ವತ ಪ್ರಭಾವವನ್ನು ಬೀರಿದ ಅದ್ಭುತ ಕೈಗಾರಿಕೋದ್ಯಮಿ ರತನ್ ಟಾಟಾಗೆ ಭಾರತ ರತ್ನಮ ನೀಡಬೇಕು” ಎಂದು ಮುರ್ಮು ಅವರಿಗೆ ಬರೆದ ಪತ್ರದಲ್ಲಿ ರಾಜು ಉಲ್ಲೇಖಿಸಿದ್ದಾರೆ.

    ಆಂಧ್ರಪ್ರದೇಶದ ನರಸಾಪುರಂನ ಲೋಕಸಭಾ ಸಂಸದರಾದ ರಾಜು “ರತನ್ ಟಾಟಾ ಒಬ್ಬ ಲೆಜೆಂಡ್​. ಭಾರತ ರತ್ನಕ್ಕೆ ಅರ್ಹರಾಗಿರುವ ಒಬ್ಬ ಅಸ್ತಿತ್ವದಲ್ಲಿರುವ ವ್ಯಕ್ತಿ” ಎಂದು ಹೇಳಿದರು. ‘ಟಾಟಾ ಅವರು ದೇಶದ ದಾನಿ ಸಿರಿವಂತರ ಪಟ್ಟಿಯಲ್ಲಿ ಅಗ್ರಸ್ಥಾನಿ ಆಗಿದ್ದಾರೆ’ ಎಂದು ಅವರು ಹೇಳಿದ್ದಾರೆ

    ಅಕ್ಟೋಬರ್‌ನಲ್ಲಿ, ರತನ್ ಟಾಟಾ ಅವರಿಗೆ ಆರ್‌ಎಸ್‌ಎಸ್, ‘ಸೇವಾ ರತ್ನ’ ಪ್ರಶಸ್ತಿಯನ್ನು ನೀಡಿತ್ತು. ರತನ್ ಟಾಟಾ, ಬುಧವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಂತೆ, ಸಾಮಾಜಿಕ ಮಾಧ್ಯಮಗಳಲ್ಲಿ ಅವರಿಗೆ ಶುಭಾಶಯಗಳ ಸುರಿಮಳೆ ಹರಿದಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts