ಮುಂಬೈ: ವೀರ ಸಾವರ್ಕರ್ ಅವರ ವಿರುದ್ಧ ಮಾತನಾಡಿದ ಮತ್ತು ಭಾರತ ರತ್ನಕ್ಕೆ ವಿರೋಧಿಸಿದವರನ್ನು ಟೀಕಿಸಿದ್ದ ಶಿವಸೇನಾ ಮುಖಂಡ ಸಂಜಯ್ ರಾವತ್ ಅವರ ಹೇಳಿಕೆಯನ್ನು ಸಾವರ್ಕರ್ ಮೊಮ್ಮಗ ರಂಜಿತ್ ಸಾವರ್ಕರ್ ಸ್ವಾಗತಿಸಿದ್ದಾರೆ.
ಶಿವಸೇನೆಯು ಸಾವರ್ಕರ್ಗೆ ಆಗುವ ಅವಮಾನವನ್ನು ಖಂಡಿಸುತ್ತ ಬಂದಿದೆ. ಸಂಜಯ್ ರಾವತ್ ಅವರ ಹೇಳಿಕೆ ಈ ಮಾತಿಗೆ ಪೂರಕವಾಗಿದೆ. ಈಗಲಾದರೂ ಶಿವಸೇನೆಯವರು ಕಾಂಗ್ರೆಸ್ಗೆ ಈ ಬಗ್ಗೆ ಮನವರಿಕೆ ಮಾಡಿಕೊಡಲಿ ಎಂದಿದ್ದಾರೆ.
ವೀರ ಸಾವರ್ಕರ್ ಅವರಿಗೆ ಭಾರತ ರತ್ನ ನೀಡಲು ವಿರೋಧಿಸುವವರನ್ನು ಅಂಡಮಾನ್ ಜೈಲಿನಲ್ಲಿ ಎರಡು ದಿನ ಇಡಬೇಕು ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಇಂದು ಮುಂಜಾನೆ ಕಿಡಿ ಕಾರಿದ್ದರು.
ಸಾವರ್ಕರ್ ಅವರನ್ನು ವಿರೋಧಿಸುವವರು ಯಾವ ಪಕ್ಷದವರೇ ಆಗಲಿ, ಯಾವ ಸಿದ್ಧಾಂತದವರೇ ಆಗಲಿ ಅವರನ್ನು ಸಾವರ್ಕರ್ ಅವರನ್ನು ಬ್ರಿಟಿಷರು ಇರಿಸಿದ್ದ ಅಂಡಮಾನ್ ಜೈಲಿನಲ್ಲಿ ಇಡಬೇಕು. ಆಗ ಅವರಿಗೆ ಗೊತ್ತಾಗುತ್ತದೆ, ಸಾವರ್ಕರ್ ಅವರ ದೇಶಕ್ಕೆ ಕೊಡುಗೆ ಏನು ಎಂದು ಎಂದು ಹೇಳಿದ್ದರು.
ಈ ಮಾತುಗಳನ್ನು ಉಲ್ಲೇಖಿಸಿದ ರಂಜಿತ್ ಸಾವರ್ಕರ್, ರಾಹುಲ್ ಗಾಂಧಿ ಅವರ ಮಾತುಗಳನ್ನು ಗಿಳಿ ಪಾಠದ ಹಾಗೆ ಹೇಳುವ ಕಾಂಗ್ರೆಸ್ ತಿಳಿಯಲಿ ಎಂದಿದ್ದಾರೆ. (ಏಜೆನ್ಸೀಸ್)