More

    ವೀರ ಸಾವರ್ಕರ್​ ಬಗ್ಗೆ ಈಗಲಾದರೂ ಶಿವಸೇನಾ ಮುಖಂಡರು ಕಾಂಗ್ರೆಸ್​ಗೆ ತಿಳಿಸಲಿ: ಸಾವರ್ಕರ್​ ಮೊಮ್ಮಗ ರಂಜಿತ್​

    ಮುಂಬೈ: ವೀರ ಸಾವರ್ಕರ್​ ಅವರ ವಿರುದ್ಧ ಮಾತನಾಡಿದ ಮತ್ತು ಭಾರತ ರತ್ನಕ್ಕೆ ವಿರೋಧಿಸಿದವರನ್ನು ಟೀಕಿಸಿದ್ದ ಶಿವಸೇನಾ ಮುಖಂಡ ಸಂಜಯ್​ ರಾವತ್​ ಅವರ ಹೇಳಿಕೆಯನ್ನು ಸಾವರ್ಕರ್​ ಮೊಮ್ಮಗ ರಂಜಿತ್​ ಸಾವರ್ಕರ್​ ಸ್ವಾಗತಿಸಿದ್ದಾರೆ.

    ಶಿವಸೇನೆಯು ಸಾವರ್ಕರ್​ಗೆ ಆಗುವ ಅವಮಾನವನ್ನು ಖಂಡಿಸುತ್ತ ಬಂದಿದೆ. ಸಂಜಯ್​ ರಾವತ್​ ಅವರ ಹೇಳಿಕೆ ಈ ಮಾತಿಗೆ ಪೂರಕವಾಗಿದೆ. ಈಗಲಾದರೂ ಶಿವಸೇನೆಯವರು ಕಾಂಗ್ರೆಸ್​ಗೆ ಈ ಬಗ್ಗೆ ಮನವರಿಕೆ ಮಾಡಿಕೊಡಲಿ ಎಂದಿದ್ದಾರೆ.

    ವೀರ ಸಾವರ್ಕರ್​ ಅವರಿಗೆ ಭಾರತ ರತ್ನ ನೀಡಲು ವಿರೋಧಿಸುವವರನ್ನು ಅಂಡಮಾನ್​ ಜೈಲಿನಲ್ಲಿ ಎರಡು ದಿನ ಇಡಬೇಕು ಎಂದು ಶಿವಸೇನಾ ಮುಖಂಡ ಸಂಜಯ್​ ರಾವತ್​ ಇಂದು ಮುಂಜಾನೆ ಕಿಡಿ ಕಾರಿದ್ದರು.

    ಸಾವರ್ಕರ್​ ಅವರನ್ನು ವಿರೋಧಿಸುವವರು ಯಾವ ಪಕ್ಷದವರೇ ಆಗಲಿ, ಯಾವ ಸಿದ್ಧಾಂತದವರೇ ಆಗಲಿ ಅವರನ್ನು ಸಾವರ್ಕರ್​ ಅವರನ್ನು ಬ್ರಿಟಿಷರು ಇರಿಸಿದ್ದ ಅಂಡಮಾನ್​ ಜೈಲಿನಲ್ಲಿ ಇಡಬೇಕು. ಆಗ ಅವರಿಗೆ ಗೊತ್ತಾಗುತ್ತದೆ, ಸಾವರ್ಕರ್​ ಅವರ ದೇಶಕ್ಕೆ ಕೊಡುಗೆ ಏನು ಎಂದು ಎಂದು ಹೇಳಿದ್ದರು.

    ಈ ಮಾತುಗಳನ್ನು ಉಲ್ಲೇಖಿಸಿದ ರಂಜಿತ್​ ಸಾವರ್ಕರ್​, ರಾಹುಲ್​ ಗಾಂಧಿ ಅವರ ಮಾತುಗಳನ್ನು ಗಿಳಿ ಪಾಠದ ಹಾಗೆ ಹೇಳುವ ಕಾಂಗ್ರೆಸ್​ ತಿಳಿಯಲಿ ಎಂದಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts