More

    ರಂಗೋಲಿ ಪ್ರಾಚೀನ ಅಭಿವ್ಯಕ್ತಿ ಮಾಧ್ಯಮ, ರಂಗೋಲಿ ಕಲಾ ಪರಿಷತ್ತು ಉದ್ಘಾಟಿಸಿ ಡಾ.ಚೆಲುವರಾಜು ಹೇಳಿಕೆ

    ಗಂಗೊಳ್ಳಿ: ರಂಗೋಲಿ ಕಲೆ ಆದಿ ಮಾನವರ ಕಾಲದಲ್ಲಿ ಆರಂಭವಾಗಿ ಈವರೆಗೆ ವಿಕಸನ ಮತ್ತು ಪರಿಷ್ಕರಣೆಗೊಳ್ಳುತ್ತ ಬಂದಿದೆ. ಅದು ಮನುಷ್ಯನ ಭಾಷೆ ಮತ್ತು ಮಾತಿನ ಹುಟ್ಟಿಗಿಂತ ಹಿಂದಿನ ಅಭಿವ್ಯಕ್ತಿ ಮಾಧ್ಯಮವಾಗಿತ್ತು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ವಿಭಾಗ ಮುಖ್ಯಸ್ಥ ಡಾ.ಚೆಲುವರಾಜು ಹೇಳಿದರು.

    ಮರವಂತೆ ಸಾಧನಾ ಸಮುದಾಯ ಭವನದಲ್ಲಿ ಭಾನುವಾರ ಜರುಗಿದ ಸಮಾರಂಭದಲ್ಲಿ ಕನ್ನಡ ಜಾನಪದ ಪರಿಷತ್ತಿನ ಅಂಗ ಸಂಸ್ಥೆಯಾಗಿ ಆರಂಭಗೊಂಡ ರಂಗೋಲಿ ಕಲಾ ಪರಿಷತ್ತನ್ನು ಉದ್ಘಾಟಿಸಿ ಮಾತನಾಡಿದರು. ರಂಗೋಲಿ ಮೂಲತಃ ರೇಖೆಗಳಿಂದ ಆರಂಭವಾಗಿ, ಅನ್ಯ ಆಕೃತಿಗಳಲ್ಲಿ ಮೈದಳೆಯುತ್ತ ಬೆಳೆಯಿತು. ನಾವು ಈಗ ಬಳಸುವ ಹಲವು ಚಿಹ್ನೆಗಳ ಮೂಲ ರಂಗೋಲಿ. ರೇಖಾ ಸಂಸ್ಕೃತಿ ರಾಮಾಯಣ, ಮಹಾಭಾರತ ಕಾಲದಲ್ಲೂ ಇತ್ತು ಎನ್ನುವುದಕ್ಕೆ ನಿದರ್ಶನಗಳಿವೆ. ಇಂದು ಬಳಕೆಯಾಗುತ್ತಿರುವ ನಾಗಮಂಡಲದಂತಹ ಧಾರ್ಮಿಕ ಆಚರಣೆಗಳ ಹಿನ್ನೆಲೆಯಲ್ಲಿ ರಂಗೋಲಿ ಸಂಸ್ಕೃತಿ ಇದೆ. ರಂಗೋಲಿಯ ಎಲ್ಲ ಆಕೃತಿಗಳೂ ನಿಸರ್ಗ ಸಂಬಂಧಿ. ಈ ಕಲೆಯನ್ನು ಅಧ್ಯಯನ ಮಾಡಿ ಡಾಕ್ಟರೇಟ್ ಗಳಿಸಿ, ರಾಜ್ಯ ಜಾನಪದ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿ ಆಗಿರುವ ಡಾ.ಭಾರತಿ ಮರವಂತೆ ಅವರ ನೇತೃತ್ವದಲ್ಲಿ ಆರಂಭವಾದ ರಂಗೋಲಿ ಕಲಾ ಪರಿಷತ್ತು ರಂಗೋಲಿಯ ಬಳಕೆ ಹೆಚ್ಚಿಸುವುದರ ಜತೆಗೆ ಅದಕ್ಕೆ ವಿಶ್ವ ಮಾನ್ಯತೆ ತಂದು ಕೊಡಲಿ ಎಂದು ಹಾರೈಸಿದರು.

    ಅಧ್ಯಕ್ಷತೆ ವಹಿಸಿದ್ದ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಡಾ.ಎಸ್. ಬಾಲಾಜಿ ರಂಗೋಲಿ ಕಲೆಯ ಕುರಿತು ಇನ್ನಷ್ಟು ಅಧ್ಯಯನ ನಡೆಯಬೇಕು ಎಂದರು. ನಿವೃತ್ತ ಪ್ರಾಂಶುಪಾಲ ಡಾ.ಕನರಾಡಿ ವಾದಿರಾಜ ಭಟ್, ನಿವೃತ್ತ ಉಪನ್ಯಾಸಕ ಎಸ್.ಜನಾರ್ದನ ಮರವಂತೆ, ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಕಾಂತಪ್ಪ ಕೆ. ಸಿ., ಕುಂದಾಪುರ ತಾಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ಉದಯಕುಮಾರ, ಮರವಂತೆ ಶಾಲಾ ಮುಖ್ಯಶಿಕ್ಷಕ ಸತ್ಯನಾ ಕೊಡೇರಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವಿ ಮಡಿವಾಳ, ಆಸರೆ ಟ್ರಸ್ಟ್‌ನ ಟ್ರಸ್ಟಿ ಸಂತೋಷ ಮೊಗವೀರ ಉಪಸ್ಥಿತರಿದ್ದರು. ಡಾ.ಭಾರತಿ ಮರವಂತೆ ಸ್ವಾಗತಿಸಿ, ಪ್ರಸ್ತಾವಿಸಿದರು. ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಗಂಗೊಳ್ಳಿ ವಂದಿಸಿದರು. ರಾಜೇಶ ಆಚಾರ್ಯ ಮರವಂತೆ ಕಾರ್ಯಕ್ರಮ ನಿರೂಪಿಸಿದರು.

    ಕನ್ನಡ ಜಾನಪದ ಪರಿಷತ್ತು ವರ್ಷಕ್ಕೊಂದು ಜನ-ಜಾನಪದೋತ್ಸವ ನಡೆಸುತ್ತದೆ. ಈ ಸಾಲಿನ ಉತ್ಸವವನ್ನು ಮಾರ್ಚ್‌ನಲ್ಲಿ ಮರವಂತೆ ಪರಿಸರದ ವ್ಯಕ್ತಿ ಮತ್ತು ಸಂಘಟನೆಗಳ ನೆರವಿನಿಂದ ಮರವಂತೆಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.
    – ಡಾ.ಎಸ್. ಬಾಲಾಜಿ, ಕನ್ನಡ ಜಾನಪದ ಪರಿಷತ್ತು ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts