ರಾಣೆಬೆನ್ನೂರ: ನಗರದ ಶನೈಶ್ಚರ ಮಂದಿರದಲ್ಲಿ ಮಹಾಲಯ ಅಮವಾಸ್ಯೆ ನಿಮಿತ್ತ ಸೋಮವಾರ ಲೋಕಕಲ್ಯಾಣಾರ್ಥವಾಗಿ ಹೋಮ, ಪೂರ್ಣಾಹುತಿ, ತೈಲಾಭಿಷೇಕ, ಮಹಾಮಂಗಳಾರತಿ ಸೇರಿ ವಿವಿಧ ವಿಶೇಷ ಪೂಜೆ ಜರುಗಿದವು.
ನೇತೃತ್ವ ವಹಿಸಿದ್ದ ಮಂದಿರದ ಶಿವಯೋಗಿ ಸ್ವಾಮೀಜಿ ಮಾತನಾಡಿ, ಹೋಮ, ಯಾಗ ಮಾಡುವುದರಿಂದ ಪರಿಸರ ಶುದ್ಧವಾಗುತ್ತದೆ. ಮನುಷ್ಯನಲ್ಲಿನ ರೋಗ-ರುಜೀನಗಳು ದೂರವಾಗುತ್ತವೆ. ಪರಿಸರದಲ್ಲಿನ ಕ್ರಿಮಿ-ಕೀಟಗಳು ನಾಶವಾಗುತ್ತವೆ ಎಂದರು.
ಪ್ರಮುಖರಾದ ಪುನೀತ, ಗುದ್ಲೇಶ್ವರ, ಪರಮೇಶ್ವರ ಮತ್ತಿತರರು ಪಾಲ್ಗೊಂಡಿದ್ದರು.