More

    ಬಳ್ಳಾರಿ ರಾಜನಿಗೆ ಮಂಡ್ಯ ರಾಣಿ ! ರಣಧೀರ್​ಗೆ ಜೋಡಿಯಾದ ರಿತನ್ಯ ಶೆಟ್ಟಿ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು:

    ಬಳ್ಳಾರಿ ಮೂಲದ ರಣಧೀರ್​ ನಾಯಕ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ಸಿನಿಮಾ “ರಾಜರಾಣಿ’. ಇತ್ತೀಚೆಗಷ್ಟೆ ಚಿತ್ರದ ಟ್ರೇಲರ್​ ಮತ್ತು ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ಚಿತ್ರದ ಟೀಸರ್​ ಬಿಡುಗಡೆ ಮಾಡಿದ ನಟಿ ಅದ್ವಿತಿ ಶೆಟ್ಟಿ, “ಟ್ರೇಲರ್​ ಪ್ರಾಮಿಸಿಂಗ್​ ಆಗಿದೆ. ಹೊಸಬರ ಸಿನಿಮಾ ಅಂತನ್ನಿಸುವುದಿಲ್ಲ. ನಾನು ಕೂಡ ಚಿತ್ರರಂಗಕ್ಕೆ ಬಂದಾಗ ಹೊಸಬಳಾಗಿದ್ದೆ. ಇತ್ತೀಚೆಗಷ್ಟೆ ನಾನು ನಟಿಸಿರುವ “ಧೀರಸಾಮ್ರಾಟ್​’ ಚಿತ್ರ 25 ದಿನ ಪೂರೈಸಿದೆ. ಅದರಂತೆಯೇ “ರಾಜರಾಣಿ’ ಕೂಡ ಯಶಸ್ಸುಗಳಿಸಲಿ’ ಎಂದು ಚಿತ್ರತಂಡಕ್ಕೆ ಶುಭಹಾರೈಸಿದರು.

    ಬಳ್ಳಾರಿ ರಾಜನಿಗೆ ಮಂಡ್ಯ ರಾಣಿ ! ರಣಧೀರ್​ಗೆ ಜೋಡಿಯಾದ ರಿತನ್ಯ ಶೆಟ್ಟಿ

    ನಿರ್ದೇಶಕ ರಣಧೀರ್​, “”ಪುದಿಯವರುಗಳ್​’ ಎಂಬ ತಮಿಳು ಚಿತ್ರಕ್ಕೆ ನಾಯಕನಾಗಿ ಅವಕಾಶ ಬಂದಿತ್ತು. ನಂತರ ಕನ್ನಡದಲ್ಲಿ ಮೂರು ಸಿನಿಮಾಗಳಲ್ಲಿ ನಟಿಸಿದೆ. ಆ ಅನುಭವದೊಂದಿಗೆ ಈ ಚಿತ್ರ ಮಾಡಿದ್ದೇನೆ. ಅನಾಥನಾಗಿದ್ದ ನಾಯಕನಿಗೆ ಆತನ ಅಜ್ಜಿ ಯಾವಾಗಲೂ ನಿನಗೆ ರಾಣಿ ಸಿಗುತ್ತಾಳೆ, ಅವಳ ಮೂಲಕ ನಿನಗೆ ಎಲ್ಲವೂ ಸಿಗುತ್ತದೆ ಎಂದು ಹೇಳುತ್ತಿರುತ್ತಾಳೆ. ಅದರಂತೆ ಕಥೆಯೂ ರಾಣಿಯ ಸುತ್ತ ಸಾಗುತ್ತದೆ’ ಎಂದು ಮಾಹಿತಿ ನೀಡಿದರು.

    ಬಳ್ಳಾರಿ ರಾಜನಿಗೆ ಮಂಡ್ಯ ರಾಣಿ ! ರಣಧೀರ್​ಗೆ ಜೋಡಿಯಾದ ರಿತನ್ಯ ಶೆಟ್ಟಿ

    ಮಂಡ್ಯ ಮೂಲದ ರಿತನ್ಯ ಶೆಟ್ಟಿ ರಣಧೀರ್​ಗೆ ನಾಯಕಿಯಾಗಿದ್ದು, ಜೀವನ್​, ಗಿರಿಜಾ ಲೋಕೇಶ್​, ಶೋಭರಾಜ್​, ಬಿರಾದಾರ್​, ಕಿಲ್ಲರ್​ ವೆಂಕಟೇಶ್​ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಪ್ರಕಾಶ್​ ಸಂಗೀತ, ಮಧು ಛಾಯಾಗ್ರಹಣ, ಥ್ರಿಲ್ಲರ್​ ಮಂಜು ಸಾಹಸ ಹಾಗೂ ನಿಶೀತ್​ ಸಂಕಲನವಿರಲಿದೆ. ಬೆಂಗಳೂರು, ಮಂಗಳೂರು, ಮಾಲೂರು, ಕೋಲಾರ, ಚಿಕ್ಕಮಗಳೂರು, ದೊಡ್ಡಬಳ್ಳಾಪುರ ಸುತ್ತಮುತ್ತ 75 ದಿನಗಳ ಕಾಲ ಶೂಟಿಂಗ್​ ನಡೆಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts