More

    ರಾಮನಗರದಿಂದ ಶಬರಿಮಲೆಗೆ ಹೋಗಿದ್ದವರ ಮಿನಿ ಬಸ್​ಅಪಘಾತ: 20ಕ್ಕೂ ಹೆಚ್ಚು ಜನರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

    ರಾಮನಗರ: ಶಬರಿಮಲೆಗೆ ಮಿನಿ ಬಸ್​ನಲ್ಲಿ ರಾಮನಗರ ತಾಲೂಕು ಪೇಟೆ ಕುರುಬರಹಳ್ಳಿಯ ಭಕ್ತರು ಅಪಘಾತಕ್ಕೀಡಾಗಿದ್ದಾರೆ.

    ಪೇಟೆ ಕುರುಬರಹಳ್ಳಿಯಿಂದ ನವೆಂಬರ್ 20ರ ರಾತ್ರಿ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆಂದು ಮಿನಿ ಬಸ್​ನಲ್ಲಿ ಸುಮಾರು 24 ಮಂದಿ ತೆರಳಿದ್ದರು.

    ಶಬರಿಮಲೆ ದರ್ಶನ ಮುಗಿಸಿಕೊಂಡು ಧರ್ಮಸ್ಥಳಕ್ಕೆ ಬರುವಾಗ ಮಾರ್ಗಮಧ್ಯೆ ಕೇರಳದ‌ ಕಣ್ಣೂರು ಬಳಿಯ ಪೊನ್ನೂರು ಬಳಿ ಮಿನಿಬಸ್​ಗೆ ಲಾರಿ ಡಿಕ್ಕಿ ಹೊಡೆದಿದೆ.
    ಅಪಘಾತದಲ್ಲಿ 23 ಜನರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಅವಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಿನಿ ಬಸ್​ನ ಮುಂಭಾಗ ಜಖಂ ಆಗಿದೆ. ಗಾಯಾಳುಗಳನ್ನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಪೊನ್ನೂರು ಠಾಣೆ ಪೊಲೀಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ನನಗೂ ವೈಷ್ಣವಿ ಗೌಡಗೂ ಎಂಗೇಜ್ಮೆಂಟ್ ಆಗಿಲ್ಲ, ಅದೊಂದು ಬೊಟ್ಟು ಇಡುವ ಶಾಸ್ತ್ರ: ವಿದ್ಯಾಭರಣ್

    ಉಡುಪಿಯಲ್ಲಿ ದುರಂತ: ಮದ್ವೆ ಮುನ್ನಾ ದಿನದ ರೋಸ್ ಕಾರ್ಯಕ್ರಮದಲ್ಲಿ ಕುಸಿದು ಬಿದ್ದ ಯುವತಿ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts