ರಾಮನಗರ: ಶಬರಿಮಲೆಗೆ ಮಿನಿ ಬಸ್ನಲ್ಲಿ ರಾಮನಗರ ತಾಲೂಕು ಪೇಟೆ ಕುರುಬರಹಳ್ಳಿಯ ಭಕ್ತರು ಅಪಘಾತಕ್ಕೀಡಾಗಿದ್ದಾರೆ.
ಪೇಟೆ ಕುರುಬರಹಳ್ಳಿಯಿಂದ ನವೆಂಬರ್ 20ರ ರಾತ್ರಿ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆಂದು ಮಿನಿ ಬಸ್ನಲ್ಲಿ ಸುಮಾರು 24 ಮಂದಿ ತೆರಳಿದ್ದರು.
ಶಬರಿಮಲೆ ದರ್ಶನ ಮುಗಿಸಿಕೊಂಡು ಧರ್ಮಸ್ಥಳಕ್ಕೆ ಬರುವಾಗ ಮಾರ್ಗಮಧ್ಯೆ ಕೇರಳದ ಕಣ್ಣೂರು ಬಳಿಯ ಪೊನ್ನೂರು ಬಳಿ ಮಿನಿಬಸ್ಗೆ ಲಾರಿ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ 23 ಜನರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಅವಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಿನಿ ಬಸ್ನ ಮುಂಭಾಗ ಜಖಂ ಆಗಿದೆ. ಗಾಯಾಳುಗಳನ್ನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಪೊನ್ನೂರು ಠಾಣೆ ಪೊಲೀಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನನಗೂ ವೈಷ್ಣವಿ ಗೌಡಗೂ ಎಂಗೇಜ್ಮೆಂಟ್ ಆಗಿಲ್ಲ, ಅದೊಂದು ಬೊಟ್ಟು ಇಡುವ ಶಾಸ್ತ್ರ: ವಿದ್ಯಾಭರಣ್
ಉಡುಪಿಯಲ್ಲಿ ದುರಂತ: ಮದ್ವೆ ಮುನ್ನಾ ದಿನದ ರೋಸ್ ಕಾರ್ಯಕ್ರಮದಲ್ಲಿ ಕುಸಿದು ಬಿದ್ದ ಯುವತಿ ಸಾವು!