ಬೆಂಗಳೂರು: ಮಾಜಿ ಸಚಿವ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್ ಸಿಡಿಯಲ್ಲಿ ಕಾಣಿಸಿಕೊಂಡಿರುವ ಯುವತಿ ಈಗ ಎಲ್ಲಿದ್ದಾಳೆ ಗೊತ್ತಾ? ಸಿಡಿ ಲೇಡಿ ಕುರಿತು ಸ್ಫೋಟಕ ಮಾಹಿತಿ ಇಲ್ಲಿದೆ.
ಮಾ.2ರಂದು ಸೆಕ್ಸ್ ಸಿಡಿ ವೈರಲ್ ಆಗುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿತ್ತು. ಮರುದಿನವೇ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ದೂರುದಾರ ದಿನೇಶ್ ಕಲ್ಲಹಳ್ಳಿ ದೂರು ಹಿಂಪಡೆಗೆ ನಿರ್ಧರಿಸುತ್ತಿದ್ದಂತೆ ರಮೇಶ್ ಜಾರಕಿಹೊಳಿ, ‘ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಿ, ಇದು ನಕಲಿ ಸಿಡಿ’ ಎಂದು ದೂರು ದಾಖಲಿಸಿದ್ದರು. ಇದರ ಬೆನ್ನಲ್ಲೇ ‘ರಮೇಶ್ ಜಾರಕಿಹೊಳಿ ಅವರು ನನಗೆ ಕೆಲಸ ಕೊಡಿಸುವುದಾಗಿ ನಂಬಿಸಿ, ನನ್ನನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಇದರಿಂದ ನನ್ನ ಮಾನ ಮರ್ಯಾದೆ ಊರು ತುಂಬಾ ಹರಾಜಾಗಿದೆ. ಆ ಅಶ್ಲೀಲ ವಿಡಿಯೋ ಹೇಗೆ ಮಾಡಿದಾರೋ ನನಗೆ ಗೊತ್ತಿಲ್ಲ. ಗೃಹಸಚಿವರು ನನಗೆ ರಕ್ಷಣೆ ನೀಡಬೇಕು’ ಎಂದು ಸಿಡಿ ಲೇಡಿ ಮನವಿ ಮಾಡಿಕೊಂಡಿದ್ದರ ವಿಡಿಯೋವನ್ನು ಅಜ್ಞಾತ ಸ್ಥಳದಿಂದಲೇ ರಿಲೀಸ್ ಮಾಡಲಾಗಿತ್ತು. ತನಿಖೆ ನಡೆಸುತ್ತಿರುವ ಎಸ್ಐಟಿ ತಂಡ ಸಿಡಿ ಕೇಸ್ನ ಯುವತಿಯನ್ನ ವಿಚಾರಣೆ ನಡೆಸಲು ಆಕೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ, ಆ ಯುವತಿ ಸಿಡಿ ಹೊರ ಬಂದ ಕೂಡಲೇ ಸಿಡಿ ಕೇಸ್ನ ಶಂಕಿತ ಕಿಂಗ್ಪಿನ್, ಹ್ಯಾಕರ್ ಜತೆ ಬೆಂಗಳೂರು ಬಿಟ್ಟಿದ್ದಾಳೆ. ಬೆಂಗಳೂರಿನಿಂದ ನೇರವಾಗಿ ಆರೋಪಿಗಳು ಮತ್ತು ಯುವತಿ ಗೋವಾ ತಲುಪಿದ್ದಾರೆ. ಇದನ್ನೂ ಓದಿರಿ ರಮೇಶ್ ಜಾರಕಿಹೊಳಿ ಮನೆಗೆ ಇಂದ್ರಜಿತ್ ಲಂಕೇಶ್ ಬಂದಿದ್ದೇಕೆ?
ಸಿಡಿ ಕೇಸ್ನ ಶಂಕಿತ ಕಿಂಗ್ಪಿನ್ನ ಸ್ನೇಹಿತನಿಗೆ ಕಾಫಿ ಡೇ ನಡೆಸುತ್ತಿರುವ ಮಹಿಳೆಯೊಬ್ಬರ ಪರಿಚಯ ಇತ್ತು. ಆ ಸ್ನೇಹಿತ ಗೋವಾದಲ್ಲಿರುವ ಮಹಿಳೆಯ ಮೂಲಕ ಈ ಮೂವರಿಗೂ ರೂಂ ಬುಕ್ ಮಾಡಿ ಸಹಾಯ ಮಾಡುವಂತೆ ಹೇಳಿದ್ದ. ಅದರಂತೆ ಗೋವಾದಲ್ಲಿ ಕಾಫಿ ಡೇ ನಡೆಸುತ್ತಿದ್ದ ಮಹಿಳೆ ರೂಂ ಬುಕ್ ಮಾಡಿದ್ದರು. ಬುಕ್ ಅದ ತಕ್ಷಣ ವಿಳಾಸವನ್ನ ಸಿಡಿ ಕೇಸ್ನ ಶಂಕಿತ ಕಿಂಗ್ಪಿನ್ನ ಗೆಳೆಯನಿಗೆ ನೀಡಲಾಗಿತ್ತು. ಈ ವಿಳಾಸ ಪಡೆದ ಸಿಡಿ ಕೇಸ್ನ ಶಂಕಿತ ಕಿಂಗ್ಪಿನ್, ಹ್ಯಾಕರ್ ಮತ್ತು ಯುವತಿ ಮೂವರು ಗೋವಾಕ್ಕೆ ಹೋಗಿದ್ದರು. ಅಲ್ಲೇ ಇದ್ದುಕೊಂಡು ಕರ್ನಾಟಕದಲ್ಲಿ ಆಗುತ್ತಿರುವ ಸಿಡಿ ಕೇಸ್ನ ಬೆಳವಣಿಗೆ ಬಗ್ಗೆ ಮಾಹಿತಿ ಪಡೆಯುತ್ತಿದ್ದರು.
ಯಾವಾಗ ಖಾಕಿ ಕಣ್ಣು ತಮ್ಮತ್ತ ಬಿದ್ದಿದೆ ಎಂದು ಗೊತ್ತಾಗುತ್ತಿದ್ದಂತೆ ಆ ಮೂವರು ಅಲ್ಲಿಂದಲೂ ಎಸ್ಕೇಪ್ ಆಗಿದ್ದಾರೆ. ಗೋವಾದಲ್ಲಿರುವ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಎಸ್ಐಟಿ ತಂಡ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ. ಆದರೆ ಇನ್ನೂ ಅವರು ಸಿಕ್ಕಿಲ್ಲ. ಪ್ರಮುಖ ಆರೋಪಿಗಳ ಜತೆಯಲ್ಲೇ ಸಿಡಿ ಲೇಡಿ ಇದ್ದಾಳೆ ಎನ್ನಲಾಗಿದೆ. ಸಿಡಿ ಲೀಕ್ ಆದ ಬೆನ್ನಲ್ಲೇ ಊರೂರು ಸುತ್ತುತ್ತಿರುವ ಆರೋಪಿಗಳು ದಿನಕ್ಕೊಂದು ಜಾಗ ಬದಲಿಸುತ್ತಿದ್ದಾರಂತೆ. (ದಿಗ್ವಿಜಯ ನ್ಯೂಸ್)
ತವರು ಮನೆಯಲ್ಲಿ ಮಗಳು ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಸುಂದರಿ
ಶಾಸಕರ ದೌರ್ಜನ್ಯ ಸಹಿಸಲಾಗ್ತಿಲ್ಲ.. ದಯಾಮರಣ ಕೊಡಿ ಎಂದು ಸಿಎಂ ಪುತ್ರನ ಬಳಿ ಕಣ್ಣೀರಿಟ್ಟ ಮಹಿಳೆಯರು
ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುಷ್ಕರ್ಮಿಗಳು! ಕರುಗೆ ಹಾಲುಣಿಸಲಾಗದೆ ನರಳುತ್ತಿದೆ ಮೂಕಜೀವಿ