More

    ರಾಯರಿಗೆ ರಜತ ರಥ ಸಮರ್ಪಣೆ

    ರಾಯಚೂರು: ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ನವೀಕೃತಗೊಂಡ ರಜತ ರಥವನ್ನು ಭಾನುವಾರ ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ರಾಯರಿಗೆ ಸಮರ್ಪಣೆ ಮಾಡಿದರು. ರಜತ ರಥ ಹಳೆಯದಾಗಿದ್ದರಿಂದ ನೂರಾರು ಕೆಜಿ ಬೆಳ್ಳಿಯನ್ನು ಉಪಯೋಗಿಸಿ ನವೀಕೃತಗೊಳಿಸಲಾಗಿದೆ. ಶ್ರೀಗಳು ರಥದ ಕಳಸಕ್ಕೆ ಅಭಿಷೇಕ, ಪೂಜೆ ಹಾಗೂ ಆರತಿ ನೆರವೇರಿಸಿ ನವೀಕೃತ ರಥವನ್ನು ರಾಯರಿಗೆ ಸಮರ್ಪಿಸಿದರು. ಶ್ರೀಮಠದ ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸರಾವ್, ವೆಂಕಟೇಶ ಜೋಷಿ, ಭಕ್ತರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts