More

    ಕ್ವಾರಂಟೈನ್​ನಲ್ಲಿ ಇರುವುದಾಗಿ ಘೋಷಿಸಿರುವ ರಾಜಸ್ಥಾನ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ

    ಜೈಪುರ: ರಾಜಸ್ಥಾನ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಹಾಗೂ ಅವರ ಪುತ್ರ ದುಶ್ಯನ್​ ಸಿಂಗ್​ ಕ್ವಾರಂಟೈನ್​ನಲ್ಲಿ ಉಳಿಯುವುದಾಗಿ ತಿಳಿಸಿದ್ದಾರೆ.

    ಗಾಯಕಿ ಕನಿಕಾ ಕಪೂರ್ ಅವರು ನೀಡಿದ ಪಾರ್ಟಿಯಲ್ಲಿ ವಸುಂಧರಾ ರಾಜೆ ಹಾಗೂ ಅವರ ಪುತ್ರ ದುಶ್ಯನ್​ ಸಿಂಗ್​ ಪಾಲ್ಗೊಂಡಿದ್ದ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ.

    ಗಾಯಕಿ ಕನಿಕಾ ಕಪೂರ್​ ಅವರಿಗೆ ಕರೊನಾ ವೈರಸ್​ ಸೋಂಕು ಹರಡಿರುವುದು ದೃಢವಾಗುತ್ತಿದ್ದಂತೆ ರಾಜೆ ಹಾಗೂ ಅವರ ಪುತ್ರ ಪ್ರತ್ಯೇಕವಾಗಿ ಇರುವುದಾಗಿ ತಿಳಿಸಿದ್ದಾರೆ.

    ಲಕ್ನೋದಲ್ಲಿ ನಡೆದ ಔತಣಕೂಟದಲ್ಲಿ ನಾನು, ನನ್ನಪುತ್ರ ಹಾಗೂ ಅಳಿಯನೊಂದಿಗೆ ಪಾಲ್ಗೊಂಡಿದ್ದೆ. ಈ ವೇಳೆ ಸೋಂಕು ಹರಡಿರಬಹುದು ಎಂದು ಅನಿಸುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ.

    ಗಾಯಕಿ ಕನಿಕಾ ಕಪೂರ್​ ಅವರು, ಲಂಡನ್​ಗೆ ತೆರಳಿದ್ದರು. ಮಾ.15ರಂದು ಅವರು ರಾಷ್ಟ್ರಕ್ಕೆ ಆಗಮಿಸಿದ್ದರು. ಅವರು ಲಂಡನ್​ನಿಂದ ಬಂದಿರುವುದನ್ನು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸದೆ ಮುಚ್ಚಿಟ್ಟಿದ್ದರು. ಅಲ್ಲದೆ ಅವರು ಔತಣಕೂಟ ಏರ್ಪಡಿಸಿದ್ದರು ಎಂದು ತಿಳಿದು ಬಂದಿದೆ.

    ರಾಜಸ್ತಾನದಲ್ಲಿ ರಾಜೆ ಹಾಗೂ ಅವರ ಪುತ್ರನೊಂದಿಗೆ ಸಂಪರ್ಕಕ್ಕೆ ಬಂದವರ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. (ಏಜೆನ್ಸೀಸ್​)

    ಕರೊನಾ ವೈರಸ್​ ಸೋಂಕು ಹರಡುವಿಕೆ ತಪ್ಪಿಸಲು ಶೃಂಗೇರಿ ಶ್ರೀ ಶಾರದಾ ದೇವಿ ದರ್ಶನ ತಾತ್ಕಾಲಿಕ ರದ್ದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts