ನವದೆಹಲಿ: ರಾಜಸ್ಥಾನ ವಿಧಾನಸಭೆ ಪೌರತ್ವ ತಿದ್ದುಪಡಿ ಕಾಯ್ದೆ ಹಿಂಪಡೆಯಲು ಆಗ್ರಹಿಸುವ ನಿರ್ಣಯವನ್ನು ಶನಿವಾರ ಅಂಗೀಕರಿಸಿದೆ.
ಆಯವ್ಯಯ ಮಂಡನೆ ಅಧಿವೇಶನದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಮಂಡಿಸಿದ ಈ ನಿರ್ಣಯ ಅಂಗೀಕಾರವಾಯಿತು.
ಹೀಗೆ ಪೌರತ್ವ ತಿದ್ದಪಡಿ ಕಾಯ್ದೆಯನ್ನು ಅಂಗೀಕರಿಸಿದ ವಿಧಾನಸಭೆಗಳಲ್ಲಿ ರಾಜಸ್ಥಾನ ಮೂರನೇಯದು. ಬಿಜೆಪಿಯೇತರ ಪಕ್ಷಗಳು ಆಡಳಿತದಲ್ಲಿರುವ ಕೇರಳ ಮತ್ತು ಪಂಜಾಬ್ ರಾಜ್ಯ ವಿಧಾನಸಭೆಗಳು ಸಿಎಎ ವಿರುದ್ಧ ನಿರ್ಣಯವನ್ನು ಈಗಾಗಲೇ ಅಂಗೀಕರಿಸಿವೆ. (ಏಜೆನ್ಸೀಸ್)