ನವದೆಹಲಿ: ಪಕ್ಷದ ಸಂಘಟನಾತ್ಮಕ ಪುನಶ್ಚೇತನಕ್ಕೆ ಪತ್ರಬರೆದು ಕೇಳಿಕೊಂಡರೆ, ಪತ್ರ ಬರೆದ ಟೈಮಿಂಗ್, ಸನ್ನಿವೇಶ ಎಲ್ಲ ಮುಂದಿಟ್ಟುಕೊಂಡು ನಮ್ ಮೇಲೆನೇ ಗೂಬೆ ಕೂರಿಸಿದ್ಯಲ್ಲಪ್ಪ.. ನಾವು ಬಿಜೆಪಿ ಜತೆ ಸೇರ್ಕೊಂಡು ಪಿತೂರಿ ಮಾಡ್ತಿದ್ದೀವಾ! ಹೀಗಂತ – ಹಿರಿಯ ನಾಯಕ ಕಪಿಲ್ ಸಿಬಲ್ ಟ್ವೀಟ್ ಮಾಡಿ ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಜತೆ ಸೇರ್ಕೊಂಡು ಕುತಂತ್ರ ಮಾಡ್ತಿದ್ದೀರಲ್ಲ- ಪತ್ರಬರೆದವರ ವಿರುದ್ಧ ರಾಗಾ ಆಕ್ರೋಶ
ಕಪಿಲ್ ಸಿಬಲ್ ತಮ್ಮ ಟ್ವೀಟ್ನಲ್ಲಿ ಹೇಳಿಕೊಂಡಿರೋದಿಷ್ಟು – ರಾಹುಲ್ ಗಾಂಧಿ ಹೇಳ್ತಾರೆ ನಾವು ಬಿಜೆಪಿ ಜತೆ ಸೇರ್ಕೊಂಡು ಪಿತೂರಿ ನಡೆಸ್ತಿದ್ದೀವಂತೆ. ಹೀಗಾಗಿಯೆ ರಾಜಸ್ಥಾನ ಹೈಕೋರ್ಟ್ನಲ್ಲಿ ಕಾಂಗ್ರೆಸ್ ಪಕ್ಷವನ್ನು ಡಿಫೆಂಡ್ ಮಾಡಿ ಯಶಸ್ವಿಯಾದ್ವಿ. ಮಣಿಪುರದಲ್ಲೂ ಪಕ್ಷವನ್ನು ಡಿಫೆಂಡ್ ಮಾಡ್ಕೊಂಡು ಬಿಜೆಪಿ ಸರ್ಕಾರ ಪತನವಾಗುವಂತೆ ನೋಡ್ಕೊಂಡ್ವಿ. ಕಳೆದ ಮೂವತ್ತು ವರ್ಷಗಳ ಅವಧಿಯಲ್ಲಿ ಒಮ್ಮೆಯೂ ಯಾವುದೇ ವಿಷಯದಲ್ಲೂ ಬಿಜೆಪಿ ಪರವಾಗಿ ಹೇಳಿಕೆ ನೀಡಿಲ್ಲ. ಇಷ್ಟಾಗ್ಯೂ ನಾವು ಬಿಜೆಪಿ ಜತೆ ಸೇರಿ ಪಿತೂರಿ ಮಾಡ್ತೀದ್ದೇವೆ! ”.