More

    ಪುನೀತ್​ ಹುಟ್ಟಿದ್ದೇ ಈ ಉದ್ದೇಶಕ್ಕೆ …

    ಬೆಂಗಳೂರು: ಪುನೀತ್​ ರಾಜಕುಮಾರ್​ ಅಭಿನಯದ ಕೊನೆಯ ಚಿತ್ರ ‘ಗಂಧದ ಗುಡಿ’ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಚಿತ್ರದ ನೋಡಿದವರೆಲ್ಲರೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇನ್ನು, ಪುನೀತ್​ ಅವರ ಸಹೋದ ರಾಘವೇಂದ್ರ ರಾಜಕುಮಾರ್​ ಸಹ ಚಿತ್ರವನ್ನು ಮೆಚ್ಚಿ ಹೊಗಳಿದ್ದಾರೆ. ‘ಗಂಧದ ಗುಡಿ’ ನೋಡಿ ಪುನೀತ್​ ಅಭಿನಯದ ಯಾವೊಂದು ಸಿನಿಮಾಗಳು ನೆನಪಿಗೆ ಬರದಷ್ಟು, ಆ ಚಿತ್ರ ಮನಸ್ಸಿನಲ್ಲಿ ಕೂತಿದೆ ಎಂದು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಚಿತ್ರ ವಿಮರ್ಶೆ – ‘ಗಂಧದ ಗುಡಿ’ ಒಂದು ಚಿತ್ರವಲ್ಲ, ಅದೊಂದು ಅನುಭವ

    ಈ ಕುರಿತು ಮಾತನಾಡಿರುವ ಅವರು. ‘ಅಪ್ಪು ಜತೆಗೆ ಈ ಚಿತ್ರ ನೋಡಬೇಕಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಚಿತ್ರ ನೋಡಿದ ಮೇಲೆ ನಾವೇ ಪುನೀತ್ ಜತೆಗೆ ಕಾಡಿಗೆ ಹೋಗಿ ಬಂದ ಹಾಗಿದೆ. ಅವನು ರಾಜಕುಮಾರ್ ಮಗನಾಗಿ ಯಾಕೆ ಹುಟ್ಟಿದ ಅನ್ನೋದು ಈಗ ಗೊತ್ತಾಗುತ್ತಿದೆ. ಅವನು ಸಿನಿಮಾ ಮಾಡಲು ಭೂಮಿಗೆ ಬಂದಿಲ್ಲ. ಜನರಿಗೆ ಒಂದು ಅದ್ಭುತ ಸಂದೇಶ ನೀಡಲು ಬಂದಿದ್ದಾರೆ. ಮೂರು ತಿಂಗಳು ಈ ಸಿನಿಮಾಗಾಗಿ ಮುಡಿಪಾಗಿಟ್ಟು ಒಂದೊಳ್ಳೆಯ ಸಂದೇಶ ನೀಡಿದ್ದಾನೆ. ನಾವು ಇಷ್ಟು ದಿನ ಮಾಡಿದ್ದು ಸಿನಿಮಾ ಅಲ್ಲ. ಇದು ನಿಜವಾದ ಸಿನಿಮಾ’ ಎಂದು ಮೆಚ್ಚಿಕೊಂಡಿದ್ದಾರೆ.

    ‘ಗಂಧದ ಗುಡಿ’ಯಷ್ಟೇ ಅಲ್ಲ, ಪುನೀತ್​ ಸಹ ಯಾವಾಗಲೂ ಮನಸ್ಸಿನಲ್ಲಿ ಉಳಿಯುತ್ತಾರೆ ಎಂದಿರುವ ರಾಘವೇಂದ್ರ ರಾಜಕುಮಾರ್​, ‘ಈ ಸಿನಿಮಾ ಮಾಡಿರೋದೆ ಆಸ್ಕರ್ ಪ್ರಶಸ್ತಿ ಬಂದ ಹಾಗಿದೆ. ಪುನೀತ್​ ಅಭಿಮಾನಿಗಳು ಈ ಚಿತ್ರವನ್ನು ಸಂಭ್ರಮಿಸುತ್ತಿದ್ದಾರೆ. ಚಿಕ್ಕಮಕ್ಕಳಿಗೆ ಈ ಸಿನಿಮಾ ತೊರಿಸಬೇಕು. ಪುನೀತ್​ ತನ್ನ ಕರ್ತವ್ಯವನ್ನು ಯಶಸ್ವಿಯಾಗಿ ಮಾಡಿಮುಗಿಸಿದ್ದಾನೆ. ಇನ್ನು ನನ್ನ ಕರ್ತವ್ಯ ಏನು ಎಂಬುದನ್ನು ಹುಡುಕಬೇಕು. ಅಪ್ಪು ಯೂ ಆರ್​ ಗ್ರೇಟ್​’ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಬ್ರಹ್ಮಾಸ್ತ್ರ ಬಿಡ್ತಾರಾ? ಕರ್ಣ ಆಗ್ತಾರಾ? ಯಶ್​ ಮುಂದಿದೆ ಎರಡು ಆಯ್ಕೆಗಳು

    ಇನ್ನು, ‘ಗಂಧದ ಗುಡಿ’ಯ ಬಗ್ಗೆ ಮಾತನಾಡುವ ರಾಘವೇಂದ್ರ ರಾಜಕುಮಾರ್​ ಮಗ ಯುವ ರಾಜಕುಮಾರ್​, ‘ಪ್ರಕೃತಿಯನ್ನ ಉಳಿಸಬೇಕು ಅನ್ನೋದು ನಾವೆಲ್ಲರೂ ಸೇರಿ ಮಾಡಬೇಕು. ಈ ಚಿತ್ರವನ್ನು ಒಂದೊಂದು ಬಾರಿ ನೋಡಿದಾಗಲೂ ಒಂದೊಂದು ಅರ್ಥವಾಗುತ್ತದೆ. ಮಕ್ಕಳನ್ನ ಕರೆದುಕೊಂಡು ಹೋಗಿ ಸಿ‌ನಿಮಾ ತೋರಿಸಿ ಎಂದು ಶಾಲೆಯವರಲ್ಲಿ ಕೇಳಿಕೊಳ್ಳುತ್ತೇನೆ. ಎಲ್ಲರೂ ಸಿನಿಮಾ ನೋಡಲೇಬೇಕು. ಇದು ನೋಡಲೇಬೇಕು ಎನ್ನುವಂತ ಸಿನಿಮಾ’ ಎನ್ನುತ್ತಾರೆ ಯುವ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts