More

    ಬಸ್​ ಚಾಲಕನನ್ನು ಪ್ರೀತಿಸಿ ಮದುವೆಯಾದ ಇಂಜಿನಿಯರಿಂಗ್​ ವಿದ್ಯಾರ್ಥಿನಿಗೆ ಕಾದಿತ್ತು ಶಾಕ್​!

    ವೇಮುರು: ಪ್ರೀತಿಸಿ ಮದುವೆಯಾಗಿದ್ದ ಯುವತಿಯನ್ನು ಆಕೆಯ ಕುಟುಂಬಸ್ಥರು ಅಪಹರಿಸಿರುವ ಘಟನೆ ಆಂಧ್ರ ಪ್ರದೇಶದ ಅನಂತವರಂನಲ್ಲಿ ಸೋಮವಾರ ನಡೆದಿದೆ.

    ಆಂಧ್ರ ಪೊಲೀಸರ ಪ್ರಕಾರ ಗುಂಟೂರು ಜಿಲ್ಲೆಯ ಕೊಲ್ಲಿಪರ ಮಂಡಲದ ಲಕ್ಷ್ಮೀ ಪೂಜಿತ ಎಂಬಾಕೆ ಅನಂತಪುರ ಜಿಲ್ಲೆಯ ಕೊಲ್ಲೂರು ವಲಯದ ವಿಶ್ವನಾಥ್​ ಎಂಬಾತನನ್ನು ಪ್ರೀತಿಸಿ ಮದುವೆ ಆಗಿದ್ದಾಳೆ. ಲಕ್ಷ್ಮೀ ಪೂಜಿತಾ ತೆನಾಲಿ ಬಳಿಯ ಇಂಜಿನಿಯರ್​ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ವಿಶ್ವನಾಥ್​ ಅದೇ ಕಾಲೇಜಿನಲ್ಲಿ ಬಸ್​ ಚಾಲಕನಾಗಿದ್ದ. ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು.

    ಇಬ್ಬರು ಕಳೆದ ಏಪ್ರಿಲ್​ 11ರಂದು ಮದುವೆ ಆಗಿದ್ದರು. ಆದರೆ, ಈ ಮದುವೆ ಯುವತಿ ಮನೆಯವರಿಗೆ ಇಷ್ಟವಿರಲಿಲ್ಲ. ಇಂಜಿನಿಯರಿಂಗ್​ ಶಿಕ್ಷಣವನ್ನು ಮುಗಿಸದೇ ಪೂಜಿತಾ ಮದುವೆಯಾಗಿದ್ದಳು. ನವದಂಪತಿ ಅನಂತವರಂನಲ್ಲಿ ನೆಲೆಸಿದ್ದರು.

    ಸೋಮವಾರ ಬೆಳಗ್ಗೆ ಅನಂತವರಂನಲ್ಲಿರುವ ಪೂಜಿತಾ ಅವರ ಅತ್ತೆ ಮನೆಗೆ ಬಂದ ಅವರ ಅಜ್ಜಿ, ಆಂಟಿ ಮತ್ತು ಅಂಕಲ್​ ತಾಯಿಗೆ ಹುಷಾರಿಲ್ಲ ಎಂದು ಹೇಳಿದ್ದಾರೆ. ಆದರೆ, ಇದನ್ನು ನಂಬಲು ಒಪ್ಪದ ಪೂಜಿತಾ ಅವರೊಂದಿಗೆ ತೆರಳು ನಿರಾಕರಿಸಿದ್ದಾಳೆ. ಇದಾದ ಬಳಿಕ ಪೂಜಿತಾ ಅವರ ತಂದೆ ಶ್ರೀನಿವಾಸ ರೆಡ್ಡಿ, ಸಹೋದರ ನಿರಂಜನ್​ ರೆಡ್ಡಿ ಮತ್ತು ಕೆಲ ಯುವಕರು ಪೂಜಿತಾಳನ್ನು ಬಲವಂತವಾಗಿ ಕಾರಿನಲ್ಲಿ ಹಾಕಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ.

    ಪೂಜಿತಾಳನ್ನು ಹೊತ್ತುಯ್ಯುವ ಸಮಯದಲ್ಲಿ ಆಕೆಯ ಪತಿ ವಿಶ್ವನಾಥ್​ ಬಿಡಿಸಲು ಪ್ರಯತ್ನಿಸಿದಾದರೂ ಆತನ ಮೇಲೆ ಹಲ್ಲೆ ಮಾಡಿ ಪೂಜಿತಾಳನ್ನು ಅಪಹರಿಸಿದ್ದಾರೆ. ಈ ಸಂಬಂಧ ವಿಶ್ವನಾಥ್​ ಸ್ಥಳೀಯ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

    ಚಿಕನ್​ ಶೋರ್ಮಾ ತಿಂದ ಮರುದಿನವೇ ವಿದ್ಯಾರ್ಥಿನಿ ಸಾವು: ಮರಣೋತ್ತರ ವರದಿಯಲ್ಲಿತ್ತು ಸ್ಫೋಟಕ ಸಂಗತಿ

    ಎಲ್ಲವೂ ಕಾಮನ್​… ಲಾಕಪ್​ ಶೋನಲ್ಲಿ ಸಿನಿ ಜಗತ್ತಿನ ಕರಾಳ ಮುಖ ಬಯಲು ಮಾಡಿದ ನಟಿ ಕಂಗನಾ ರಣಾವತ್​!

    ಮನೆ ಮಾರಿ 50 ಲಕ್ಷ ರೂ. ಕೊಟ್ರು… ಕೆಲ್ಸನೂ ಹೋಯ್ತು- ದುಡ್ಡೂ ಹೋಯ್ತು.. ಅರೆಸ್ಟೂ ಆದ್ರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts